ಸಾಧನೆ ಮಾಡಿದ ಕಿರಣ ಗಾಣಿಗೇರ ನಿಗೆ ಧಾರವಾಡದಲ್ಲಿ ಸನ್ಮಾನ ಗೌರವ – ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ಆಪ್ತರಿಂದ ಸನ್ಮಾನಿಸಿ ಗೌರವ…..

Suddi Sante Desk

ಧಾರವಾಡ –

ಮಹಾರಾಷ್ಟ್ರದ ಕೋಲ್ಹಾಪೂರದಲ್ಲಿ ಓಟ,ಈಜು,ಸೈಕ್ಲಿಂಗ್ ನಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ ಪೊಲೀಸ್ ಇಲಾಖೆಯ ಕಿರಣ ಗಾಣಿಗೇರ ಅವರಿಗೆ ಧಾರವಾಡದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಹೌದು ಮೊದಲ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಶಿಷ್ಠವಾದ ಸಾಧನೆ ಯನ್ನು ಮಾಡಿ ಪ್ರಶಸ್ತಿಯನ್ನು ಮುಡಿಗೆ ಹಾಕಿಕೊಂಡ ಕಿರಣ ಗಾಣಿಗೇರ ಇವರಿಗೆ ಧಾರವಾಡದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಹೌದು ನಗರದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಸಮಸ್ತ ಅಧಿಕಾರಿಗಳು ಆಪ್ತರು ಗೆಳೆಯರು ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಿದರು. ನಗರ ದಲ್ಲಿ ಚಿಕ್ಕದಾದ ಕಾರ್ಯಕ್ರಮವೊಂದನ್ನು ಮಾಡಿ ಕಿರಣ ಗಾಣಿಗೇರ ಅವರ ಸಾಧನೆಯನ್ನು ಕೊಂಡಾಡಿದರು.

ಇದೇ ವೇಳೆ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿ ಮುಂದಿನ ಸಾಧನೆಗೆ ಉತ್ಸಾಹವನ್ನು ತುಂಬಿದರು. ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಒಂದು ಸನ್ಮಾನ ಕಾರ್ಯವನ್ನು ಮಾಡಿ ಮುಂದಿನ ದಾಖಲೆಯ ಸಾಧನೆಗೆ ಇಂಬು ತುಂಬಿದರು.

ಸಂಚಾರಿ ಠಾಣೆಯ Asi ಅಧಿಕಾರಿಗಳಾದ ಬಸವರಾಜ ಕುರಿ,ಎಮ್ ಎನ್ ನಮಾಜೆ,ವಿರೇಶ ಬಳ್ಳಾರಿ, ಇನ್ನೂ ಹಿರಿಯ ಸಿಬ್ಬಂದಿಗಳಾದ ಹೆಚ್ ಎಮ್ ರೊಳ್ಳಿ, ಬಸಯ್ಯ. ಭೀಮನಗೌಡ್ರು,ಅಲಿ ಹಾಡ್ಕರ್,ಈರಣ್ಣ ಲಕ್ಕಮ್ಮನವರ, ಮುದುಕನಗೌಡರ,ಬಸವರಾಜ ಗುರಿಕಾರ,ಪ್ರತಾಪ ಕಾಮತ್,ಸುಧಾಕರ ಕಾಮತ್,ಇರ್ಷಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.