ನನ್ನ ಹುಟ್ಟು ಹಬ್ಬಕ್ಕೆ ಬ್ಯಾನರ್, ಪ್ಲೇಕ್ಸ್,ಶಾಲು,ಹೂಗುಚ್ಚ ತರಬೇಡಿ ಅದೇ ಹಣದಲ್ಲಿ ನಾವು ನೀವು ಸೇರಿ ಶಾಲಾ ಮಕ್ಕಳಿಗೆ ಸಹಾಯ ವನ್ನು ಮಾಡೋಣ ಶಾಸಕ ಅಮೃತ ದೇಸಾಯಿ ಸಂದೇಶ…..

Suddi Sante Desk

ಧಾರವಾಡ –

ನವಂಬರ್ 16 ರಂದು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬ.ಈ ಒಂದು ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಆಪ್ತರಿಗೆ ಕ್ಷೇತ್ರದ ಮತದಾರರಿಗೆ ಶುಭಾಶಯ ಕೋರುವವರಿಗೆ ಸಂದೇಶ ಕಳಿಸಿದ್ದಾರೆ.

ಹೌದು ಆತ್ಮೀಯರೇ ಇದೇ ತಿಂಗಳು ೧೬ ರಂದು ನನ್ನ ಹುಟ್ಟುಹಬ್ಬವಿದ್ದು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನನ್ನ ಹುಟ್ಟುಹಬ್ಬದ ನಿಮಿತ್ಯ ಯಾರೂ ಬ್ಯಾನರ್, ಹೋರ್ಡಿಂಗ್ಸ್ ಅಥವಾ ಪ್ಲೆಕ್ಸ್ ಗಳನ್ನು ಹಾಕಬೇಡಿ ಯಾರೂ ಶಾಲು, ಹೂಗುಚ್ಛ ಅಥವಾಉಡುಗೊರೆಗಳನ್ನು ತರಬೇಡಿ ಎಂದಿದ್ದಾರೆ

ಅದೇ ಹಣವನ್ನು ಪ್ರೀತಿಯಿಂದ ನಿಮ್ಮ ಹತ್ತಿರದ ಶಾಲಾ ಮಕ್ಕಳಿಗೆ ಅಗತ್ಯ ಪುಸ್ತಕ,ಪಠ್ಯಪೂರಕ ಪರಿಕರಗಳನ್ನು ನೀಡಿ ಅಥವಾ ಸಂಕಷ್ಟದಲ್ಲಿರುವ ಬಡಜನರಿಗೆ ಸಹಾಯ ಹಸ್ತ ಚಾಚಿ ಎಂದು ಎಲ್ಲಾ ಕಾರ್ಯಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳಲ್ಲಿ ಕಳಕಳಿಯ ಮನವಿ.ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಮತ್ತು ಆಶೀರ್ವಾದ ನನಗೆ ಯಾವತ್ತೂ ಶ್ರೀರಕ್ಷೆಯಾಗಿರುತ್ತದೆ ಎಂದಿದ್ದಾರೆ. ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ಯನ್ನು ರಾಜಕೀಯದೊಂದಿಗೆ ತೋರಿಸಿಕೊಟ್ಟಿದ್ದಾರೆ

ವರದಿ – ಆತ್ಮಾನಂದ ಸುದ್ದಿ ಸಂತೆ ಡೆಸ್ಕ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.