ಬೆಂಗಳೂರಿನತ್ತ ಹೊರಟ ಶಿಕ್ಷಕರು ಧಾರವಾಡ ಜಿಲ್ಲೆಯಿಂದಲೇ 200 ಕ್ಕೂ ಹೆಚ್ಚು ಶಿಕ್ಷಕರು…..

Suddi Sante Desk

ಧಾರವಾಡ –

ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಕರೆದಿರುವ ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಬೆಂಗಳೂರಿನತ್ತ ಹೊರಟಿದ್ದಾರೆ.ಹೌದು ನಾಳೆ ಈ ಒಂದು ಮಹತ್ವದ ಅಂತಿಮ ತೀರ್ಮಾನದ ಸಭೆ ನಡೆಯಲಿ ದ್ದು ಹೀಗಾಗಿ ಈ ಒಂದು ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ಬೆಂಗಳೂರಿ ನತ್ತ ಪ್ರಯಾಣ ಬೆಳೆಸಿದ್ದಾರೆ

ಹೌದು ನಾಳೆ ಮಧ್ಯಾಹ್ನ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಈ ಒಂದು ಮಹತ್ವದ ಸಭೆ ನಡೆಯಲಿದ್ದು ಹೀಗಾಗಿ ಈ ಸಭೆಯಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯದ ಬಹುತೇಕ ಪ್ರಮಾಣದಲ್ಲಿ ಶಿಕ್ಷಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು

ಧಾರವಾಡ ಜಿಲ್ಲೆಯಿಂದಲೇ 200 ಕ್ಕೂ ಹೆಚ್ಚು ಶಿಕ್ಷಕರು ನಾಳೆಯ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆ ಹೇಳಿಕೊಂಡು ಸಲಹೆ ಸೂಚನೆಗಳನ್ನು ನೀಡಲಿ ದ್ದಾರೆ.

ಒಟ್ಟಾರೆ ನಾಳೆಯ ಸಭೆ ತೀವ್ರವಾದ ಆಸಕ್ತಿ ಮೂಡಿಸಿದ್ದು ನಾಳೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಳ್ಳ ಲಿದ್ದು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಮುಂದಿನ ಯಾವ ನಿರ್ಧಾರವನ್ನು ತಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.