ನಾಳೆಯ ಶಿಕ್ಷಕರ ಸಭೆಯ ಸಿದ್ದತೆ ಹೇಗಿದೆ ಗೊತ್ತಾ – ಶಿಕ್ಷಕರೊಂದಿಗೆ ಸಿದ್ದತೆ ಪರಿಶೀಲನೆ ಮಾಡಿದ ಷಡಕ್ಷಾರಿ ಅವರು…..

Suddi Sante Desk

ಬೆಂಗಳೂರು –

ಹಲವಾರು ವರ್ಷಗಳಿಂದ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ನಾಳೆ ಚರ್ಚೆ ಮಾಡಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಶಿಕ್ಷಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ.

ನಾಳೆಯ ಈ ಒಂದು ಸಭೆಗೆ ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಪ್ರಮಾಣದಲ್ಲಿ ಶಿಕ್ಷಕರು ಬೆಂಗಳೂರಿಗೆ ತೆರಳಿದ್ದಾರೆ.ಇನ್ನೂ ನಾಳೆಯ ಈ ಒಂದು ಸಭೆ ಫ್ರೀಡಂ ಪಾರ್ಕ್ ನ ನೌಕರರ ಭವನದ ಆವರಣದಲ್ಲಿ ನಡೆಯಲಿದ್ದು ಇದಕ್ಕಾಗಿ ಬಹಿರಂಗ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತಿದೆ

ಇನ್ನೂ ನಾಳೆಯ ಸಭೆಯ ವ್ಯವಸ್ಥೆಯ ಕುರಿತು ಷಡಕ್ಷಾರಿ ಅವರು ಪರಿಶೀಲನೆ ಮಾಡಿದರು.ಈಗಾಗಲೇ ಆಗಮಿಸಿದ ಶಿಕ್ಷಕರೊಂದಿಗೆ ಸಿದ್ದತೆ ಕುರಿತು ವೀಕ್ಷಣೆ ನಡೆಸಿ ಚರ್ಚೆ ಮಾಡಿದರು

ವೇದಿಕೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಷಡಕ್ಷಾರಿ ಅವರು ಶಿಕ್ಷಕ ಬಂಧುಗಳೊಂದಿಗೆ ಸಂಪೂರ್ಣವಾಗಿ ಸಿದ್ದತೆ ಯನ್ನು ವೀಕ್ಷಣೆ ಮಾಡಿ ಸಲಹೆ ಸೂಚನೆಗಳನ್ನು ನೀಡಿ ಸಭೆಗೆ ಬಂದ ಶಿಕ್ಷಕರನ್ನು ಬರಮಾಡಿಕೊಂಡರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.