ನಿವೃತ್ತ BEO ಎಮ್ ಬಿ ಮಾಳಗಿ ಇನ್ನೂ ನೆನಪು ಮಾತ್ರ – ಜೀವಂತವಿದ್ದಾಗಲೇ ಪತ್ನಿಗೆ ತಮ್ಮ ಕೆಲಸ ಕೊಡಿಸಬೇಕೆನ್ನುವ ಆಸೆ ಈಡೇರಲಿಲ್ಲ…..

Suddi Sante Desk

ಧಾರವಾಡ –

ಶಿಕ್ಷಣ ಇಲಾಖೆ ಒರ್ವ ಆದರ್ಶ ಅಧಿಕಾರಿಯನ್ನು ಕಳೆದು ಕೊಂಡಿದೆ.ಹೌದು ಈ ಹಿಂದೆ ಕಲಘಟಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಎಂ ಬಿ ಮಾಳಗಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಅನಾರೋ ಗ್ಯದ ಹಿನ್ನಲೆಯಲ್ಲಿ ಧಾರವಾಡದ ನಿವಾಸದಲ್ಲಿ ವಿಶ್ರಾಂತಿ ಯೊಂದಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.ನಿನ್ನೆ ಮತ್ತೆ ಆರೋಗ್ಯ ಕ್ಷೀಣಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸ ಲಾಯಿತು ಚಿಕಿತ್ಸೆ ಫಲಿಸದೇ ನಿಧನರಾದರು.

ಇನ್ನೂ ಈ ಹಿಂದೆ ಕಲಘಟಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿ ಕಾರಿಗಳಾಗಿ ಸೇವೆ ಸಲ್ಲಿಸಿ ವಿಭಾಗ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿಗಳೆಂದು ಪ್ರಶಸ್ತಿ ಪಡೆದಿದ್ದರು.1999 ನೇ ಬ್ಯಾಚಿನ ಶಿಕ್ಷಣಾಧಿಕಾರಿಗಳಾಗಿದ್ದರು ಇನ್ನೂ ಇವರ ಅಂತ್ಯ ಕ್ರಿಯೆ ಧಾರವಾಡದ ನಿಸಗ೯ ಲೇ ಔಟ್ ಹನುಮಂತ ನಗರ ಕ್ರಾಸ್ ನ ಶಾಂತಿಸದನ ಸ್ಕೂಲ್ ಹತ್ತಿರ ನೆರವೆರಲಿದೆ.ಇನ್ನೂ ಪ್ರಮುಖವಾಗಿ ಮೃತರಾದ ಎಮ್ ಬಿ ಮಾಳಗಿ ಸೇವೆಯಲ್ಲಿ ದ್ದಾಗ ತಮ್ಮ ಆರೋಗ್ಯದ ವಿಚಾರವನ್ನು ತಿಳಿದುಕೊಂಡು ಇವರು ಇಲಾಖೆಗೆ ಸೇವಾ ನಿವೃತ್ತಿಯನ್ನು ತಗೆದುಕೊಂಡು ಅದನ್ನು ತಮ್ಮ ಪತ್ನಿಯವರಿಗೆ ನೀಡಲು ವಿನಂತಿಸಿಕೊಂಡಿ ದ್ದರು.ಸೇವಾ ನಿವೃತ್ತಿಗೂ ಕೂಡಾ ಮುಂದಾಗಿ ಅರ್ಜಿಯನ್ನು ಸಲ್ಲಸಿದ್ದರು.ತಾವು ಇನ್ನೂ ಬದುಕಿದ್ದಾಗಲೇ ಈ ಒಂದು ಕೆಲಸವನ್ನು ಮಾಡಬೇಕೆನ್ನುವ ಆಸೆ ಕೊನೆಗೂ ಈಡೇರ ಲಿಲ್ಲ ಅಂದುಕೊಂಡ ಆಸೆ ಕನಸು ನನಸಾಗಿಯೇ ಉಳಿ ಯಿತು.ಇನ್ನೂ ಮುಖ್ಯವಾಗಿ ಮೃತರಾದ ಇವರ ನಿಧನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.