ಧಾರವಾಡದಲ್ಲಿ ಪಾದಚಾರಿಗೆ BRTS ಬಸ್ ಡಿಕ್ಕಿ – ತೀವ್ರವಾಗಿ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು…..

Suddi Sante Desk

ಧಾರವಾಡ –

ಪಾದಚಾರಿಗೆ BRTS ಬಸ್ ಡಿಕ್ಕಿಯಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ಹೌದು ನಗರದ ಕೋರ್ಟ್ ವೃತ್ತದಲ್ಲಿ ಈ ಒಂದು ಘಟನೆ ನಡೆದಿದ್ದು ಪರಿಣಾಮವಾಗಿ ಪಾದಚಾರಿ ಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಧಾರವಾಡದ ಕೋರ್ಟ್ ಸರ್ಕಲ್ ಬಸ್ ನಿಲ್ದಾಣದ ಬಳಿ ನಡೆದಿದೆ.ಬಸ್ ನಿಲ್ದಾಣದತ್ತ ವೇಗವಾಗಿ ಬಂದ ಬಿಆರ್ ಟಿಎಸ್ ಬಸ್ ಪಾದಚಾರಿಗೆ ಡಿಕ್ಕಿಯಾಗಿದೆ.ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಗಲಕೋಟೆ ಯ ಮಲ್ಲಣ್ಣ ಮೇಟಿ ಗಾಯಗೊಂಡವರಾಗಿದ್ದಾರೆ

ಬಸ್ ಡಿಕ್ಕಿಯಾದ ಕೂಡಲೇ ಅಲ್ಲೇ ಕುಸಿದು ಬಿದ್ದರು ಕೂಡಲೇ ಇವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದರು.ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಯ ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.