ಬೆಳೆ ಪರಿಹಾರ ತುರ್ತು ಬಿಡುಗಡೆಗೆ ಸಂತಸಗೊಂಡ ರೈತರು ಧಾರವಾಡ ಜಿಲ್ಲೆಯ ರೈತರಿಂದ ಸಚಿವ ಜೋಷಿ ಯವರಿಗೆ ಅಭಿನಂದನೆ…..

Suddi Sante Desk

ಹುಬ್ಬಳ್ಳಿ –

ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಜುಲೈ ಮತ್ತು ನವಂಬರ್ ತಿಂಗಳ ಭಾರೀ ಮಳೆಯಿಂದ ಬೆಳೆಗಳು ಹಾನಿಗೊಳ ಗಾಗಿದ್ದು ಇದರಿಂದಾಗಿ ಕೇಂದ್ರ ಸರ್ಕಾರದ NDRF ಅಡಿ ಪರಿಹಾರವನ್ನು ಅತೀ ಶೀಘ್ರದಲ್ಲಿ ಬಿಡುಗಡೆಗೊಳಿಸಲಾ ಗಿದೆ ಇದ್ದಕ್ಕಾಗಿ ಜಿಲ್ಲೆಯ ರೈತರುಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಯವರಿಗೂ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳಿಗೆ ಧನ್ಯವಾದ ಅರ್ಪಿಸಿದರು.

ಸಚಿವ ಜೋಶಿಯವರ ನಿವಾಸದ ಮುಂದೆ ಇಂದು ಬೆಳಿಗ್ಗೆ ಆಗಮಿಸಿದ ಜಿಲ್ಲೆಯ ರೈತರುಗಳು ಫಸಲ್ ಭೀಮಾ ಯೋಜನೆ ಒಂದು ಒಳ್ಳೆಯ ಯೋಜನೆಯಾಗಿದ್ದು ಇದರಿಂ ದ ಧಾರವಾಡ ಜಿಲ್ಲೆಯ ಎಲ್ಲ ರೈತರಿಗೆ ತುಂಬ ಅನುಕೂಲ ವಾಗುತ್ತಿರುವ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂ ಡರು.ಈ ಬಾರಿ ಫಸಲ್ ಭೀಮಾ ಯೋಜನೆ ಅಡಿ ಪರಿಹಾ ರಕ್ಕಾಗಿ ಸ್ಥಾನಿಕ ಪ್ರಕೃತಿ ವಿಕೋಪದಡಿ ಈ ಬಾರಿಯ ಪರಿಹಾರ ಬಿಡುಗಡೆಗೆ ಅಧಿಕಾರಿಗಳಿಗೆ ಸರಿಯಾಗಿ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದು ಅದರಂತೆ ಕಾರ್ಯ ಪ್ರಗತಿ ಯಲ್ಲಿದೆ ಎಂದು ಸಚಿವ ಜೋಶಿಯವರು ರೈತರಿಗೆ ತಿಳಿಸಿದರು

ಈ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಬಿಡುಗಡೆ ಕುರಿತು ರೈತರು ಸಚಿವ ಜೋಷಿಯವರಲ್ಕಿ ಮನವಿ ಸಲ್ಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜೋಶಿಯವರು ಈಗಾಗಲೇ ನಾನು ಕೃಷಿ ಇಲಾಖೆ ಅಧಿಕಾರಿಗಳಿಗೆ ಮತ್ತು ಪ್ರಧಾನಮಂ ತ್ರಿ ಫಸಲ್ ಭೀಮಾ ಯೋಜನೆಯ ಸಿಇಓ ಅವರಿಗೆ ಮಾತ ನಾಡಿದ್ದು ಬೆಳೆಹಾನಿ ಸಮೀಕ್ಷೆ ಮಾಡಲು ಜಿಲ್ಲಾಡಳಿತವು ಪ್ರತಿ ಗ್ರಾಮಕ್ಕೆ ಬೆಳೆವಿಮೆ ಕಂಪನಿಯ ಪ್ರತಿನಿಧಿಗಳೊಂದಿಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೂಡ ನೇಮಕ ಮಾಡಿದ್ದು ಬೆಳೆ ಹಾನಿ ಕುರಿತು ಸಮೀಕ್ಷೆ ಯನ್ನು ಮಾಡಿ ವರದಿಯನ್ನು ಶೀಘ್ರದಲ್ಲಿ ಸಲ್ಲಿಸಲಿದ್ದಾರೆ ಈ ವರದಿ ಆಧಾರಿಸಿ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡು ವುದಾಗಿ ರೈತ ನಿಯೋಗಕ್ಕೆ ತಿಳಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.