ದಟ್ಟ ಮಂಜು ಆವರಿಸಿದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಗಾಗಿ ವಿಮಾನಕ್ಕೆ ಸಮಸ್ಯೆ – CM, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇರುವ ವಿಮಾನ ಅರ್ಧ ಗಂಟೆ ಆಕಾಶದಲ್ಲಿ ಸುತ್ತಾಟ ಕೊನೆಗೂ ಲ್ಯಾಂಡಿಂಗ್

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ವಿಮಾನಕ್ಕೆ ಸಮಸ್ಯೆ ಯಾಗಿದ್ದು ಕಂಡು ಬಂದಿತು.CM ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಯಾಣಿಸುತ್ತಿದ್ದ ಈ ಒಂದು ವಿಮಾನ ಅರ್ಧ ಗಂಟೆ ಆಕಾಶದಲ್ಲಿ ಸುತ್ತಾಡಿ ಕೊನೆಯಲ್ಲಿ ಲ್ಯಾಂಡ್ ಆಯಿತು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಹುಬ್ಬಳ್ಳಿ ಗೆ ಆಗಮಿಸಿದ್ದಾರೆ.ದಟ್ಟ ಮಂಜು ಅವರಿಸಿದ ಹಿನ್ನೆಲೆ ಲ್ಯಾಂಡಿಂಗ್ ಸಮಸ್ಯೆಯಾಯಿತು. ಬೆಂಗಳೂರಿ ನಿಂದ ಹುಬ್ಬಳ್ಳಿಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 7.30ಕ್ಕೆ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನ ಕೊನೆಗೂ ಅರ್ಧ ಗಂಟೆ ತಡವಾಗಿ ಲ್ಯಾಂಡ್ ಆಯಿತು.ಅಕಾಶದಲ್ಲೇ 3 ಸುತ್ತುಗಳನ್ನ ಸುತ್ತಿ ವಿಮಾನ ಕೆಳಗೆ ಇಳಿಯಿತು.

ಬೆಂಗಳೂರಿನಿಂದ 6E7227 ಇಂಡಿಗೋ ವಿಮಾನ ಆಗಮಿಸಿತ್ತು ಅವಕಾಶ ಸಿಗದಿದ್ದರೆ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಹೋಗಬೇಕಾಗಿತ್ತು ನಂತರ ಕ್ಲಿಯರೆನ್ಸ್ ಸಿಕ್ಕ ನಂತರ ಲ್ಯಾಂಡ್ ಆಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.