ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ತೆರೆ – ಹತ್ತು ದಿನಗಳಲ್ಲಿ ಸದನ ನಡೆದಿದೆಷ್ಟು, ಪಾಲ್ಗೊಂಡ ಜನಪ್ರತಿನಿಧಿಗಳೇಷ್ಟು ಚರ್ಚೆಯಾಗಿದ್ದೇನು ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಳಗಾವಿ –

ಮಹಾಮಾರಿ ಕೋವಿಡ್ ಆತಂಕ,ಮುಖ್ಯಮಂತ್ರಿ ಬದಲಾವಣೆಯ ಮಾತು,ಎಮ್ ಇಎಸ್ ಗಲಾಟೆ ತಂಟೆಯ ನಡುವೆ ಆರಂಭಗೊಂಡು ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನಕ್ಕೆ ಸಂಭ್ರಮದ ತೆರೆ ಬಿದ್ದಿದೆ.ಹೌದು ಡಿಸೆಂಬರ್ 13 ರಿಂದ ಆರಂಭಗೊಂಡ ಈ ಒಂದು ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ.ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು ಅಧಿವೇಶ ನವನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡಲಾಗಿದೆ ಎಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು

ಇನ್ನೂ ಕಳೆದ ಹತ್ತು ದಿನಗಳ ಈ ಒಂದು ಅಧಿವೇಶನ ಕುರಿತಂತೆ ಮಾತನಾಡಿದ ಅವರು ಬೆಳಗಾವಿಯಲ್ಲಿಈಬಾರಿ ಚಳಿಗಾಲದ ಈ ಒಂದು ಅಧಿವೇಶನದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆದಿದ್ದು 8 ಶಾಸಕರು ಸಂಪೂರ್ಣ ವಾಗಿ ಕಲಾಪಕ್ಕೆ ಗೈರಾಗಿದ್ದಾರೆ.ಶೇ.75 ರಷ್ಟು ಶಾಸಕರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.ಇನ್ನೂ ಒಂದು ವಾರ ಕಾಲ ಅಧಿವೇಶನ ನಡೆಸುವಂತೆ ಶಾಸಕರು ಒತ್ತಾಯಿಸಿ ದ್ದರು ಮುಂದಿನ ಅಧಿವೇಶನದಲ್ಲಿ ಹೆಚ್ಚು ದಿನ ಕಲಾಪ ನಡೆಸಲಾಗುವುದು ಎಂದು ಹೇಳಿದರು.ಒಟ್ಟು 10 ದಿನಗಳ ಕಾಲ ನಡೆದ ಅಧಿವೇಶನದಲ್ಲಿ 52 ಗಂಟೆಗಳ ಕಾಲ ಕಲಾಪ ನಡೆದಿದ್ದು, 150 ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರಿಸ ಲಾಗಿದೆ.ನಿಯಮಾವಳಿ ಕಾಲಮಿತಿಯಿಂದ ಹೆಚ್ಚಿನವರಿಗೆ ಅವಕಾಶ ಸಿಕ್ಕಿಲ್ಲ ಮುಂದೆ ಹೆಚ್ಚು ದಿನ ಸದನ ನಡೆಸಲು ಸರ್ಕಾರಕ್ಕೆ ತಿಳಿಸುತ್ತೇವೆ. ಈ ಬಾರಿಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದರು.ಇನ್ನೂ ಸದನದಲ್ಲಿ ಶಿಸ್ತು ಕಾಪಾಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿದ ಸಲಹೆಯನ್ನು ಸ್ವೀಕರಿಸುತ್ತೇವೆ. ನಾನು ವಿಧಾನಸಭಾ ಸ್ಪೀಕರ್ ಆಗಿ ಎರಡೂವರೆ ವರ್ಷಗ ಳಾಗಿವೆ. ಬಿ.ಎಸ್.ವೈ ನೀಡಿರುವ ಸಲಹೆಗಳನ್ನು ಜಾರಿಗೊ ಳಿಸಲು ಆಗ್ರಹಿಸುತ್ತೇನೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.