ಸರ್ಕಾರಿ ನೌಕರರಿಗೆ ಗಣರಾಜ್ಯೋತ್ಸವ ಕೊಡುಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ‌ ಆದೇಶ…..

Suddi Sante Desk

ಹಿಮಾಚಲ ಪ್ರದೇಶ –

ದೇಶಾದ್ಯಂತ ಕೋಟ್ಯಾಂತರ ಸರ್ಕಾರಿ ನೌಕರರು ಪ್ರಸ್ತುತ ತಮ್ಮ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ನಡುವೆ ಹಿಮಾಚಲ ಪ್ರದೇಶ ಸರ್ಕಾರ ತನ್ನ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆ ನೀಡಿದೆ.ಹೌದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ನೇತೃತ್ವದಲ್ಲಿನ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ 31% ಪ್ರತಿಶತ ತುಟ್ಟಿಭತ್ಯೆ ಘೋಷಿಸಿದ್ದಾರೆ.ಸೋಲನ್ ನಗರದಲ್ಲಿ ನಡೆದ ಹಿಮಾಚಲ ಪ್ರದೇಶ ರಾಜ್ಯ ಸಂಸ್ಥಾಪನಾ ದಿನಾಚರ ಣೆಯಲ್ಲಿ ಈ ಘೋಷಣೆ ಮಾಡಲಾಗಿದೆ.ಹಿಮಾಚಲ ಪ್ರದೇಶದಲ್ಲಿ 7ನೇ ವೇತನ ಆಯೋಗ ಇನ್ನೂ ಜಾರಿಯಾ ಗಿಲ್ಲ ಎಂಬುದು ಗೊತ್ತಾಗಬೇಕಿದೆ.ಆದಾಗ್ಯೂ,ಹಿಮಾಚಲ ಪ್ರದೇಶ ಸರ್ಕಾರವು ಕೆಲವು ತಿಂಗಳ ಹಿಂದೆ ಆರನೇ ವೇತನ ಆಯೋಗದ ಪ್ರಕಾರ ತನ್ನ ಉದ್ಯೋಗಿಗಳಿಗೆ ಹೊಸ ವೇತನ ಶ್ರೇಣಿಯನ್ನು ಘೋಷಿಸಿತು.

ಇನ್ನೂ ಇದರೊಂದಿಗೆ ಉದ್ಯೋಗಿಗಳು ಪಂಜಾಬ್ ಮಾದ ರಿಯಲ್ಲಿ 1,75,000 ಪಿಂಚಣಿದಾರರಿಗೆ ಪಿಂಚಣಿ ನೀಡಲಾ ಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.ಇದು ಬೊಕ್ಕಸಕ್ಕೆ 2,000 ಕೋಟಿ ಆರ್ಥಿಕ ಹೊರೆ ಬೀಳಲಿದೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರವು ಇತ್ತೀಚೆಗೆ ಹೊಸ ವೇತನ ಶ್ರೇಣಿಯಲ್ಲಿ 28 ಪರ್ಸೆಂಟ್ ಡಿಎ ಘೋಷಿಸಿತ್ತು ಮತ್ತು ಇಂದು ನಾನು ರಾಜ್ಯ ಸರ್ಕಾರಿ ನೌಕರರಿಗೆ 31 ಪರ್ಸೆಂಟ್ ಡಿಎ ಘೋಷಿಸುತ್ತೇನೆ ಇದರಿಂದ ರಾಜ್ಯ ಬೊಕ್ಕ ಸಕ್ಕೆ ವಾರ್ಷಿಕ 500 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.