ಶಿಕ್ಷಕರ ವರ್ಗಾವಣೆ ಗೆ 108 ವಿಘ್ನಗಳು – ಮಾತನಾಡದ ಸಂಘಟನೆಯ ನಾಯಕರು…..

Suddi Sante Desk

ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆ ಯ ನರಕಯಾತನೆಯ ಸಮಸ್ಯೆ ಯಿಂದಾಗಿ ಶಿಕ್ಷಕರಿಗೆ ಮುಕ್ತಿ ಸಿಗುತ್ತಿಲ್ಲ ಒಂದಲ್ಲ ಒಂದು ಸಮಸ್ಯೆಯ ನಡುವೆ ನೆನೆಗುದಿ ಗೆ ಬೀಳುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ಇಂದು ಬೆಂಗಳೂರಿನ ಪ್ರೌಢಶಾಲಾ ಶಿಕ್ಷಕರ ಅಂತರ್ ವಿಭಾಗದ ವರ್ಗಾವಣೆಯನ್ನು ತಾಂತ್ರಿಕ್ ಕಾರಣಗಳಿಂದ ಮುಂದೂ ಡಿದ್ದು ತಾಜಾ ಉದಾಹರಣೆ

ಹೌದು ಇಂದು ಬೆಂಗಳೂರಿನಲ್ಲಿ ಮೈಸೂರು ವಿಭಾಗದ ವರ್ಗಾವಣೆ ನಡೆಯಬೇಕಿತ್ತು.ಆದರೆ ಸರ್ವರ್ ತೊಂದರೆ ಯಿಂದ ಈ ದಿನದ ವರ್ಗಾವಣೆಯನ್ನು ಮುಂದೂಡಲ್ಪ ಟ್ಟಿದೆ.ಸದ್ಯದಲ್ಲೇ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಇನ್ನೂ 72,000 ಅರ್ಜಿಗಳು ವರ್ಗಾವಣೆ ಕೋರಿ ಸಲ್ಲಿಕೆ ಯಾಗಿವೆ.ಈ ಅರ್ಜಿಗಳನ್ನು ಶಿಕ್ಷಕ ಮಿತ್ರ ಅಪ್ಲಿಕೇಶನ್ ಮೂಲಕವೇ ನಿರ್ವಹಿಸಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪೂರ್ಣವಾಗಿ ಆನ್ ಲೈನ್ ಮೂಲಕವೇ ನಿರ್ವಹಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ ಆದರೆ ಇಷ್ಟೇಲ್ಲಾ ಆಗತಾ ಇದ್ದರೂ ಕೂಡಾ ಸಂಘಟನೆಯ ನಾಯಕರು ಮಾತ್ರ ಮಾತನಾಡುತ್ತಿಲ್ಲ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.