ಗಾಯಗೊಂಡ ಯುವತಿ ಆರೋಗ್ಯ ವಿಚಾರಣೆ ಮಾಡಿದ ಶಾಸಕ ಅಮೃತ ದೇಸಾಯಿ – ಯುವತಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕುಂಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ ಶಾಸಕರು

Suddi Sante Desk

ಹುಬ್ಬಳ್ಳಿ –

ಲವ್ ಜೆಹಾದ್ ಗೆ ಒಳಗಾಗಿ ಪ್ರೀತಿಸಿ ಮದುವೆಯಾಗಿ ಕಳೆದ ಮೂರು ನಾಲ್ಕು ದಿನಗಳಿಂದ ಗಂಡನಿಂದ ತೀವ್ರವಾಗಿ ಹಲ್ಲೆಗೊಳಗಾದ ಗದಗ ನ ಅಪೂರ್ವ ಪುರಾಣಿಕ ಸಧ್ಯ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾಳೆ. ಹೌದು ಆಸ್ಪತ್ರೆಯಲ್ಲಿರುವ ಯುವತಿಯ ಆರೋಗ್ಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ವಿಚಾರಣೆ ಮಾಡಿದರು.

ಆಸ್ಪತ್ರೆಗೆ ತೆರಳಿದ ಶಾಸಕ ಅಮೃತ ದೇಸಾಯಿ ಅವರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಯನ್ನು ಪಡೆಯುತ್ತಿ ರುವ ಅಪೂರ್ವಾ ಅವರ ಆರೋಗ್ಯ ವಿಚಾರಣೆ ಮಾಡಿ ದರು ಕೆಲವೊತ್ತು ಯುವತಿಯಿಂದ ಘಟನೆಯ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡರು.

ಇದೇ ವೇಳೆ ಯುವತಿಯೊಂದಿಗೆ ಮಾತನಾಡಿ ಯಾವುದ ಕ್ಕೂ ಭಯಪಡುವ ಅವಶ್ಯಕತೆ ಇಲ್ಲ ಮುಂದಿನ ಕಾನೂನು ಹೋರಾಟದ ಕುರಿತಂತೆ ಕುಟುಂಬದೊಂದಿಗೆ ನಾವು ಇದ್ದೇನಿ ಯಾವುದಕ್ಕೂ ಭಯಪಡಬೇಡಿ ಇದರ ಅವಶ್ಯಕತೆ ಇಲ್ಲ ನಾವಿದ್ದೇವೆ ಸಧ್ಯ ಸಂಪೂರ್ಣವಾಗಿ ಗುಣಮುಖರಾಗಿ ಎಂದು ಹೇಳುತ್ತಾ ಕುಟುಂಬದವರಿಗೆ ಆತ್ಮಸ್ಥೈರ್ಯವನ್ನು ತುಂಬಿದರು.

ಇದರೊಂದಿಗೆ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ತಮ್ಮ ಬಿಡುವಿಲ್ಲದ ಕೆಲಸ ಕಾರ್ಯದ ನಡುವೆ ಆಸ್ಪತ್ರೆಯಲ್ಲಿನ ಅಪೂರ್ವ ಯುವತಿ ಮತ್ತು ಕುಟುಂಬದವರಿಗೆ ಧೈರ್ಯ ತುಂಬಿ ರಾಜಕಾರಣ ದೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊ ಟ್ಟರು.

ಮಂಜುನಾಥ ಸರ್ವಿ ಜೊತೆ ಪರಶುರಾಮ ಗೌಡರ ಸುದ್ದಿ ಸಂತೆ ಡೆಸ್ಕ್ ಧಾರವಾಡ

ಕ್ಯಾಮೆರಾ ರವಿ ಗೌಡರ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.