ಅಧಿಕಾರಿಗಳು ಯಾರಾದರೂ ಲಂಚ ಕೇಳಿದರೆ ನನ್ನ What’s Up ಗೆ ಮಾಹಿತಿ ಕಳಿಸಿ – ಪಂಜಾಬ್‌ ನಲ್ಲಿ ನೂತನ CM ಮಾನ್ ಸಾರ್ವಜನಿಕರಿಗೆ ಕರೆ…..

Suddi Sante Desk

ಪಂಜಾಬ್ –

ಹೌದು ಯಾರಾದ್ರೂ ನಿಮ್ಮ ಹತ್ತಿರ ಲಂಚ ಕೇಳಿದರೆ ಇಲ್ಲ ಎಂದು ಹೇಳಬೇಡಿ ಅದರ ಬದಲಿಗೆ ಪಂಜಾಬ್ ನಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಭಗವಂತ್ ಮಾನ್ ಮಹತ್ವದ ನಿರ್ಧಾರ ಕೈಗೊಂ ಡಿದ್ದು ಭ್ರಷ್ಟಾಚಾರ ತಡೆ ಸಂಬಂಧ ಸಹಾಯವಾಣಿ ಆರಂಭಿ ಸುವುದಾಗಿ ಘೋಷಣೆ ಮಾಡಿದ್ದಾರೆ.ಈ ವಿಚಾರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಾ ಮಾತನಾ ಡಿದ್ದಾರೆ.ಲಂಚ ಕೇಳುವರಿಗೆ ಇಲ್ಲ ಎನ್ನದೆ ಹಣ ನೀಡಿ, ಅವರಿಗೆ ಹಣ ನೀಡಿದ ಸಂಭಾಷಣೆ ಅಥವಾ ಅದರ ರೆಕಾರ್ಡ್ ಮಾಡಿಕೊಳ್ಳಿ.ಬಳಿಕ ಆಡಿಯೋ,ವಿಡಿಯೋ ವನ್ನು ನೇರವಾಗಿ ಸಿಎಂ ಅವರ ವಾಟ್ಸಾಪ್ ಸಂಖ್ಯೆಗೆ ರವಾನಿಸಿ ಎಂದಿದ್ದಾರೆ.ಭ್ರಷ್ಟರ ವಿರುದ್ಧ ತಕ್ಷಣವೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಜನತೆಗೆ ನಾವು ಭರವಸೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಿನಿಂ ದಲೂ ಭಗವಂತ್ ಮಾನ್ ಜನಸ್ನೇಹಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.ಮಾರ್ಚ್ 23ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ‘ಶಹೀದ್ ದಿವಸ್’ ಅಂಗವಾಗಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸುವುದಾಗಿ ಮಾನ್ ಘೋಷಣೆ ಮಾಡಿದ್ದು ಇನ್ನೂ ಅಧಿಕಾರಿಗಳು ಯಾರಾದರೂ ಲಂಚ ಕೇಳಿದರೆ ನನ್ನ What’s Up ಗೆ ಮಾಹಿತಿ ಕಳಿಸಿ ಎನ್ನುವ ಮೂಲಕ ಪಂಜಾಬ್‌ ನಲ್ಲಿ ನೂತನ CM ಮಾನ್ ಸಾರ್ವಜ ನಿಕರಿಗೆ ಕರೆ ನೀಡಿ ಹೊಸದೊಂದು ಕ್ರಾಂತಿಗೆ ಮುಂದಾಗಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.