ಚಂದ್ರಶೇಖರ್ ಗುರೂಜಿ ಹಂತಕ ರಿಗೆ ಮಂಪರು ಪರೀಕ್ಷೆ – ಹೊಸ ದೊಂದು ಪರೀಕ್ಷೆ ಗೆ ಮುಂದಾದ ಪೊಲೀಸರು…..

Suddi Sante Desk

ಹುಬ್ಬಳ್ಳಿ –

ಸರಳ ವಾಸ್ತು ಮೂಲಕ ಮನೆ ಮಾತಾಗಿದ್ದ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿ ಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.

ಗುರೂಜಿ ಹತ್ಯೆಯಲ್ಲಿ ಇಬ್ಬರು ಆರೋಪಿಗಳಲ್ಲದೇ ಬೇರೆ ಯವರ ಕೈವಾಡವು ಇರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ – ಧಾರವಾಡ ಪೊಲೀಸರು ತನಿಖೆ ಮುಂದುವರಿಸಿ ದ್ದಾರೆ.ಆರೋಪಿಗಳ ಪೊಲೀಸ್ ಕಸ್ಟಡಿ ಸೋಮವಾರ ಅಂತ್ಯವಾಗಲಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಅವರನ್ನು ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಚಂದ್ರಶೇಖರ ಗುರೂಜಿ ಹತ್ಯೆ ಹಿಂದೆ ಮತ್ತೆ ಯಾರಿದ್ದಾರೆ ಆಸ್ತಿಯ ವಿಚಾರವೇ ಕೊಲೆಗೆ ಕಾರಣವೇ ಅಥವಾ ಬೇರೆ ಏನಾದರೂ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ತನಿಖಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.