ಸರ್ಕಾರಿ ಶಾಲೆಗೆ ದತ್ತಿ ನೀಡಿದ SDMC ಅಧ್ಯಕ್ಷ – ಅಕ್ಷರ ತಾಯಿ ಲೂಸಿ ಸಾಲ್ಡಾನ್ ರಿಂದ ಪ್ರೇರಿತ ರಾದ ಮೌಲಾಸಾಬ್ ದೊಡಮನಿ ಕಾರ್ಯಕ್ಕೆ ಮೆಚ್ಚುಗೆ…..

Suddi Sante Desk

ಧಾರವಾಡ –

ಸರ್ಕಾರಿ ಶಾಲೆಗೆ ಎಸ್ ಡಿ ಎಮ್ ಸಿ ಅಧ್ಯಕ್ಷ ರು ದತ್ತಿಯನ್ನು ನೀಡಿದ್ದಾರೆ.ಹೌದು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾದ ಮೌಲಾಸಾಬ ದೊಡಮನಿ ಪುಸ್ತಕ ನೀಡಿ ಅಭಿನಂದಿಸಿ ದರು.ಗ್ರಾಮ ಪಂಚಾಯತಿ ಅದ್ಯಕ್ಷರಾದ ತೇಜಸ್ವಿನಿ ತಲವಾಯಿ.ಉಪಾದ್ಯಕ್ಷ ವಿಠ್ಠಲ ಇಂಗಳೆ,ಸದಸ್ಯರಾದ ನಿಂಗಪ್ಪ ಮೊರಬದ,ಸುರೇಶ ಬನ್ನಿಗಿಡದ,ವಿಠ್ಠಲ ಭೋವಿ, ರೇಣುಕಾ ಅಸುಂಡಿ,ಪಿಡಿಒ ಬಿ ಡಿ ಚೌರಡ್ಡಿ.ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ದೊಡಮನಿ ಶಾಲೆಗೆ ಆರು ಸಾವಿರ ರೂಪಾಯಿಗಳನ್ನು ದತ್ತಿ ನೀಡಿದರು.

ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನರವರಿಂದ ಪ್ರೇರಿತರಾದ ಇವರು ಈ ಶಾಲೆಗೆ ಇಂದು ಗ್ರಾಮದ ಗ್ರಾಮ ಪಂಚಾಯತಿ ಅದ್ಯಕ್ಷರಾದ ತೇಜಸ್ವಿನಿ ತಮ್ಮಾಜಿರಾವ ತಲವಾಯಿ,ಉಪಾದ್ಯಕ್ಷರಾದ ವಿಠ್ಠಲ ಇಂಗಳೆ,ಸಾಮಾನ್ಯ ಸ್ಥಾಯಿ ಸಮಿತಿಯ ವಿಠ್ಠಲ ಭೋವಿ ಸುರೇಶ ಬನ್ನಿಗಿಡದ, ನಿಂಗಪ್ಪ ಮೊರಬದ,ರೇಣುಕಾ ಅಸುಂಡಿ,ಪಂಚಾಯತ ಅಭಿವೃದ್ಧಿ ಅಧಿಕಾರಿ ಬಿ ಡಿ ಚೌರಡ್ಡಿ ಇದ್ದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಾಮಾನ್ಯ ಸ್ಥಾಯಿ ಸಮಿತಿ ಯ ಸದಸ್ಯ ನಿಂಗಪ್ಪ ಮೊರಬದ ನಮ್ಮ ಊರಿನ ಎಲ್ಲಾ ಸರಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು.ಇಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು.ಈ ನಿಟ್ಟಿ ನಲ್ಲಿ ನಾವು ಶಿಕ್ಷಕರು ಶಾಲಾಭಿವೃದ್ದಿ ಸಮಿತಿಯವರು ಸಮುದಾಯದ ಸಹಭಾಗಿತ್ವದಲ್ಲಿ ಉತ್ತಮ ಕಾರ್ಯವನ್ನು ಮಾಡೋಣ ಎಂದರು.

ಇದೇ ಸಂದರ್ಭದಲ್ಲಿ ಅವರು ಎಲ್ಲಾ ಶಾಲೆಗಳಿಗೆ ಉತ್ತಮ ಪುಸ್ತಕಗಳನ್ನು ನೀಡಿದರು ಎಲ್ಲಾ ಶಾಲೆಗಳ ಪರವಾಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಾಂಬಳೆ,ಶಾಲೆ ಇದು ಸಾರ್ವಜನಿಕ ಸ್ವತ್ತು ಇಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ ಶಾಲೆಯು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇ ಕಾದರೆ ಜನ ಪ್ರತಿ ನಿಧಿಗಳು ಶಾಲಾಭಿವೃದ್ದಿ ಸಮಿತಿಯ ವರು ಜೊತೆಗೆ ಅಡುಗೆ ಸಹಾಯಕರು ಎಲ್ಲರೂ ಸೇರಿಕೊಂ ಡು ಸೌಹಾರ್ದತೆಯಿಂದ ಕಾರ್ಯ ಮಾಡಬೇಕು ಎಂದರು. ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾದ್ಯಕ್ಷರು ಸರ್ವಸದಸ್ಯರನ್ನು ಮುಕ್ತ ಕಂಠದಿಂದ ಹೊಗಳಿದರು. ಹೆಬ್ಬಳ್ಳಿಯ ಗ್ರಾಮ ಪಂಚಾಯತಿಯು ನೀಡಿದ ಉತ್ತಮ ಸಹಕಾರದಿಂದ ಇಂದು ನಮ್ಮ ಊರಿನ ಹೆಣ್ಣುಮಕ್ಕಳ ಶಾಲೆಯನ್ನು ಬೆಳಗಾವಿ ವಿಭಾಗ ಮಟ್ಟದಲ್ಲಿ ಪ್ರಶಸ್ತಿಗೆ ಗುರುತಿಸಿ ಅಧಿಕಾರಿಗಳ ತಂಡ ನಮ್ಮ ಶಾಲೆಗೆ ಬೇಟಿ ನೀಡಿ, ಮಾಹಿತಿ ಸಂಗ್ರಹಿಸಿ ಮಕ್ಕಳ ಕಲಿಕೆ ಸೇರಿದಂತೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ‌ ಡಿ ಚೌರಡ್ಡಿ.ಸ್ಥಳೀಯ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಈರಣ್ಣ ತಟ್ಟಿಮನಿ,ಹೆಣ್ಣು ಮಕ್ಕಳ ಶಾಲೆಯ ಅದ್ಯಕ್ಷರಾದ ಸುರೇಶ ಸುಣಗಾರ,ಉರ್ದು ಶಾಲೆಯ ಕನ್ನಡ ಶಿಕ್ಷಕ,ಎಲ್ ಐ ಲಕ್ಕಮ್ಮನವರ,ಜನತಾ ಪ್ಲಾಟ ಸರಕಾರಿ ಕನ್ನಡ ಪ್ರಾಥ ಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಇಮಾಮಸಾಬ ಕೊಣ್ಣೂರ,ಮುಖ್ಯ ಶಿಕ್ಷಕಿ‌ ಗೀತಾ ದೊಡಮನಿ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.