ಧಾರವಾಡದ ಮನಗುಂಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ – ಸಾರ್ವಜನಿಕರ ಪ್ರಯತ್ನ ಫಲಿಸದೇ ವಿರೂಪಾಕ್ಷ ಸಾವು ಬಸವ್ವ ಕಿಮ್ಸ್ ಆಸ್ಪತ್ರೆಗೆ ದಾಖಲು…..

Suddi Sante Desk

ಧಾರವಾಡ –

ವೃದ್ಧ ದಂಪತಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.ಪತಿ ಸಾವಿಗೀಡಾಗಿದ್ದು ಇನ್ನೂ ಪತ್ನಿ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಧಾರವಾಡ ತಾಲೂಕಿನ ಮನ ಗುಂಡಿ ಗ್ರಾಮದ ದಂಪತಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ.

ವಿರೂಪಾಕ್ಷ ದೊಡವಾಡ(70) ಮೃತ ಪತಿಯಾಗಿದ್ದು ಪತ್ನಿ ಬಸವ್ವ ದೊಡವಾಡ (60) ಸ್ಥಿತಿ ಗಂಭೀರವಾಗಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆ ಗಾಗಿ ಬಸವ್ವನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.ಕೆಲ ವರ್ಷಗಳ ಹಿಂದೆ ನಿಧನ ರಾಗಿದ್ದ ದಂಪತಿಯ ಪುತ್ರರು.ಇದರಿಂದ ಮಾನಸಿಕವಾಗಿ ನೊಂದಿದ್ದ ದಂಪತಿಗಳು.ಗ್ರಾಮ ಹೊರವಲಯದ ಅರಣ್ಯದ ದಾರಿ ಪಕ್ಕ ವಿಷ ಸೇವನೆ ಮಾಡಿದ್ದು ಈ ವೇಳೆ ಅಸ್ವಸ್ಥಗೊಂಡ ದಂಪತಿ ಗಮನಿಸಿದ ದಾರಿಹೋಕರು ಕೂಡಲೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಪತಿ ವಿರೂಪಾಕ್ಷ ಸಾವಿಗೀಡಾಗಿದ್ದು ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲು ಮಾಡಿಕೊಂಡು ಮುಂದಿ‌ನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.