ಬಾಂಬೆ ರೆಸ್ಟೋರೆಂಟ್‌ನಲ್ಲಿ ಕೇಸರಿ ಬಾತ್,ತುಪ್ಪದ ದೋಸೆ ರುಚಿ ಸವಿದ ಕೇಂದ್ರ ಸಚಿವ ಜೋಶಿ ಶಾಸಕ ಅಮೃತ ದೇಸಾಯಿ, ಜಿಲ್ಲಾಧ್ಯಕ್ಷ ಸಂಜಯ್‌ ಕಪಟಕರ ಸೇರಿದಂತೆ ಹಲವರು ಉಪಸ್ಥಿತಿ…

Suddi Sante Desk

ಧಾರವಾಡ –

ಧಾರವಾಡದ ಬಾಂಬೆ ರೆಸ್ಟೋರೆಂಟ್‌ನಲ್ಲಿ ಕೇಸರಿ ಬಾತ್, ತುಪ್ಪದ ದೋಸೆ ರುಚಿ ಸವಿದ ಕೇಂದ್ರ ಸಚಿವ ಜೋಶಿ

ಹೌದು ಕೇಂದ್ರದ ಗಣಿ,ಭೂವಿಜ್ಞಾನ ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದ ಬಾಂಬೆ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಹಾರ ಸವಿದರು.

ಧಾರವಾಡದ ಕೆಸಿಸಿ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಬಾಂಬೆ ರೆಸ್ಟೋರೆಂಟ್‌ಗೆ ತೆರಳಿ ಸಾಮಾನ್ಯ ವರ್ಗದಲ್ಲಿ ಕುಳಿತು ಕೇಸರಿ ಬಾತ್ ಹಾಗೂ ತುಪ್ಪದ ದೋಸೆಯ ರುಚಿ ಸವಿದರು ಸಚಿವ ಜೋಶಿ ಅವರಿಗೆ ಶಾಸಕ ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ,ಹುಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಾಥ್ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.