ಕಳಸೂರಮಠ ಮನೆಯಲ್ಲಿ ಹಾರಿದ ತಿರಂಗಾ – ಕುಟಂಬ ಸಮೇತರಾಗಿ ಮನೆಯ ಮೇಲೆ ಧ್ವಜಾರೋಹಣ ಮಾಡಿ ಗೌರವ…..

Suddi Sante Desk

ಧಾರವಾಡ –

75ನೇ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ದೇಶದ್ಯಾಂತ ಸಡಗರ ಸಂಭ್ರಮದಿಂದ ಹರ್ ಘರ್ ತಿರಂಗಾ ಕಾರ್ಯ ಕ್ರಮ ನಡೆದಿದ್ದು ಇತ್ತ ಧಾರವಾಡದ ಕಳಸೂರಮಠ ಮನೆಯಲ್ಲೂ ಕೂಡಾ ಹರ ಘರ್ ತಿರಂಗ ಕಾರ್ಯಕ್ರಮದ ಹಿನ್ನಲೆಯಲ್ಲಿ ಮನೆಯ ಮೇಲೆ ತಿರಂಗಾ ಧ್ವಜವನ್ನು ಹಾರಿಸಲಾಯಿತು.

ಹೌದು ನಗರದ ಸಪ್ತಾಪೂರ ಬಡಾವಣೆಯ ನಿವಾಸದಲ್ಲಿ ಈ ಒಂದು ವಿಶೇಷವಾದ ಕಾರ್ಯಕ್ರಮ ಕಂಡು ಬಂದಿತು. ಪ್ರಮುಖವಾಗಿ ಕೆಇಬಿಯ ನಿವೃತ್ತ ನೌಕರರಾಗಿರುವ ಹಿರಿ ಯರು ಬಸವರಾಜ ಕಳಸೂರಮಠ ಅವರ ನೇತ್ರತ್ವದಲ್ಲಿ ಮನೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಮಾಡಲಾ ಯಿತು.

ಹರ್ ಘರ್ ತಿರಂಗಾ ಕರೆಯ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಮನೆಯ ಮೇಲೆ ಧ್ವಜವನ್ನ ಕಟ್ಟಿ ದೇಶ ಪ್ರೇಮವನ್ನು ಮೆರೆದು ಅಭಿಯಾನಕ್ಕೆ ಸಾಥ್ ನೀಡಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಾಣಾಧಿ ಕಾರಿ ಡಾ ಎಸ್ ಬಿ ಕಳಸೂರಮಠ ಮತ್ತು ಡಾ ಕವಿತಾ ಕಳಸೂರಮಠ ಪುತ್ರಿ ಸೃಜನಾ ಸೇರಿದಂತೆ ಶೈಲಾ ಪಾಟೀಲ್ ಕಲ್ಮೇಶ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಸಾಥ್ ನೀಡಿ ಮೆರುಗು ನೀಡಿದರು.ಮನೆಯ ಮೇಲೆ ತಿರಂಗಾ ವನ್ನು ಹಾರಿಸಿ ಸೆಲ್ಯೂಟ್ ಹೊಡೆದು ದೇಶ ಪ್ರೇಮ ವನ್ನು ಮೆರೆದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.