ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ರಚನೆ ಕುರಿತಂತೆ ಷಡಾಕ್ಷರಿ ಅವರ ಸ್ಪಷ್ಟನೆ ವೇತನ ಆಯೋಗ ರಚನೆ ಕುರಿತಂತೆ ರಾಜ್ಯಾಧ್ಯಕ್ಷರು ಹೇಳಿದ್ದೇನು ಗೊತ್ತಾ ಅವರೇ ಮಾತನಾಡಿದ್ದಾರೆ ನೋಡಿ…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಆಯೋಗ ರಚನೆ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಸ್ಪಷ್ಟನೆ ನೀಡಿದ್ದಾರೆ.ಹೌದು ಬೆಂಗಳೂರಿನ ನೌಕರರ ಭವನದ ಕಚೇರಿಯಲ್ಲಿ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ ಅಕ್ಟೋಬರ್ ನಲ್ಲಿ ಸಮಿತಿ ರಚನೆ ಮಾಡೊ ದಾಗಿ ಹೇಳಿದ್ದಾರೆ.

ಇದು ರಚನೆ ಆಗೇ ಆಗುತ್ತದೆ ಈ ಒಂದು ವಿಚಾರದಲ್ಲಿ ಯಾವುದೇ ರೀತಿಯ ಗೊಂದಲವು ಬೇಡ.ಸಾಮಾಜಿಕ ಜಾಲ ತಾಣಗಳಲ್ಲಿ ಏನೇನೋ ಬರುತ್ತಿವೆ ಅವೇಲ್ಲವುಗಳ ಬಗ್ಗೆ ಆತಂಕ ಗೊಂದಲ ಬೇಡ ನಾವು ಕೂಡಾ ವಿಶ್ವಾಸವ ನ್ನಿಟ್ಟಿದ್ದೇವೆ ವರದಿ ಬಂದ ಕೂಡಲೇ ಎರಡು ಮೂರು ತಿಂಗಳಲ್ಲಿಯೇ ಈ ಒಂದು ಕುರಿತಂತೆ ಜನೇವರಿ ಯಲ್ಲಿ ಹೊಸ ಆದೇಶವನ್ನು ಪಡೆದುಕೊಳ್ಳುತ್ತೇವೆ ಎಂದರು

ಇನ್ನೂ ನಿಮ್ಮ ಪರವಾಗಿ ರಾಜ್ಯದ ಸರ್ಕಾರಿ ನೌಕರರ ಸಂಘ ಇದೆ ಯಾವುದೇ ಆತಂಕ ಬೇಡ ನಿಮ್ಮೊಂದಿಗೆ ನಾವಿದ್ದೇವೆ ಇದರಲ್ಲಿ ಯಾವುದೇ ರೀತಿಯ ಗೊಂದಲ ಆತಂಕ ಬೇಡ ಎನ್ನುತ್ತಾ ರಾಜ್ಯದ ಸರ್ಕಾರಿ ನೌಕರರ ಸಂಘವು ನಿಮ್ಮೊಂ ದಿಗೆ ಇದೆ ಎಂದು ಆತ್ಮಸ್ಥೈರ್ಯವನ್ನು ತುಂಬಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತು ಸುದ್ದಿ ಸಂತೆ ವರದಿಯೊಂದನ್ನು ಪ್ರಸಾರ ಮಾಡಿದ್ದು ಅದನ್ನು ಪ್ರಸ್ತಾಪ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.