BJP ಪಕ್ಷ ಸೇರ್ಪಡೆಯಾಗಿ M R ಪಾಟೀಲ್ ರಿಗೆ ಶಕ್ತಿ ತುಂಬಿದ ಹಲವರು – ಬದಲಾವಣೆ ಬಯಸಿ M R ಪಾಟೀಲ್ ನೇತ್ರತ್ವದಲ್ಲಿ BJP ಸೇರ್ಪಡೆ‌ಯಾದ ವಿವಿಧ ಪಕ್ಷಗಳ ಕಾರ್ಯಕರ್ತರು ಮುಖಂಡರು…..

Suddi Sante Desk
BJP ಪಕ್ಷ ಸೇರ್ಪಡೆಯಾಗಿ M R ಪಾಟೀಲ್ ರಿಗೆ ಶಕ್ತಿ ತುಂಬಿದ ಹಲವರು – ಬದಲಾವಣೆ ಬಯಸಿ M R ಪಾಟೀಲ್ ನೇತ್ರತ್ವದಲ್ಲಿ BJP ಸೇರ್ಪಡೆ‌ಯಾದ ವಿವಿಧ ಪಕ್ಷಗಳ ಕಾರ್ಯಕರ್ತರು ಮುಖಂಡರು…..

ಹುಬ್ಬಳ್ಳಿ

ಎಮ್.ಆರ್‌.ಪಾಟೀಲ್’ರನ್ನು ಗೆಲ್ಲಿಸಿ : ಮಹೇಶ ಗೋಕುಲ ಹೌದು ಕುಂದಗೋಳ ಸ್ಥಳೀಯ ಶಾಸಕರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ನಾಗರಿಕ ಸಮಾಜವನ್ನು ಗೌರವಿಸುವ ಹಾಗೂ ಅಭಿವೃದ್ಧಿ ಪರವಾದ ಚಿಂತನೆಯುಳ್ಳ ಎಮ್.ಆರ್.ಪಾಟೀಲ ಅವರಿಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ತಾಲೂಕು ಬಿಜೆಪಿ ಘಟಕದ ಕಾರ್ಯದರ್ಶಿ ಮಹೇಶ ಗೋಕುಲ ಹೇಳಿದರು.

ತರ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್‌. ಪಾಟೀಲ್ ಅವರ ಪರವಾಗಿ ಮತಯಾಚನೆ ಕೈಗೊಂಡ ಅವರು, ಅಭಿವೃದ್ಧಿ ಬೇಕೆಂಬ ಅಭಿ ಮಾನವನ್ನು ಇಟ್ಟುಕೊಂಡು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೌರವ ಸಲ್ಲಿಸಬೇಕು.

ಸದ್ಯ ಹಾಲಿ ಶಾಸಕರು ಕ್ಷೇತ್ರದ ಹಿತ ಕಾಪಾಡದೇ, ಅಭಿವೃದ್ಧಿ ಮರಿಚೀಕೆ ಮಾಡಿದ್ದಾರೆ. ಈ ಮೂಲಕ ಮತದಾರರಿಗೆ ಗೌರವ ನೀಡದೆ ಅಪಮಾನ ಮಾಡಿದ್ದಾರೆ. ಇದು ತಮಗೆ ಗೊತ್ತಿರುವ ಸಂಗತಿ. ಹೀಗಾಗಿ ಎಮ್.ಆರ್.ಪಾಟೀಲ ಅವರಿಗೆ ಅತಿ ಹೆಚ್ಚು ಮತನೀಡಿ ಗೆಲ್ಲಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ್, ಪ್ರದಾನ ಕಾರ್ಯದರ್ಶಿ ಪಕ್ಕಜ್ಜಾ ಕೋರಿ, ಭರಮಗೌಡ ದ್ಯಾವನಗೌಡ್ರ, ಮಾಲತೇಶ ಶ್ಯಾಗೋಟಿ, ಪ್ರಕಾಶಗೌಡ ಪಾಟೀಲ, ಡಿ.ವಾಯ್. ಲಕ್ಕನಗೌಡ್ರ, ಮುಖಂಡರಾದ ಡಾ.ಐ.ಎಸ್. ಹೊಸಮನಿ, ಶಂಕರಗೌಡ ತೆಂಬದಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷ ಸೇರ್ಪಡೆ

ಹೌದು ಬಿಜೆಪಿ ತತ್ವ ಸಿದ್ದಾಂತ ಮೆಚ್ಚಿ ಇಂದು ಕೂಡಾ ಕಾಂಗ್ರೆಸ್ ಪಕ್ಷ ತೊರೆದು ತರ್ಲಘಟ್ಟ ಗ್ರಾಮದ ಹಲವಾರು ಜನರು ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು.ತರ್ಲಘಟ್ಟ ಗ್ರಾಮದ ಛಲವಾದಿ ಸಮುದಯದ ನೀಲಪ್ಪ ಕಾಳಿ, ರವಿ ಕಾಳಿ, ದೇವರಾಜ ದಾನಮ್ಮನವರ, ರಮೇಶ ಕಾಳಿ, ಶಿವಲಿಂಗ ಕಾಳಿ, ಮಾಂತೇಶ ಕಾಳಿ, ಸುನಿಲ್ ಕಾಡಮ್ಮನವರ, ಮರಿಯಮ್ಮ ಕಾಡಮ್ಮನವರ, ಅನಿಲ ಕಾಳಿ, ಬಸವರಾಜ ಕರಿಕಲ್ಲ, ಚಂದ್ರು ಕಾಳಿ, ಮಂಜುನಾಥ ರೊಟ್ಟಿಗವಾಡ, ಅನಿಲ ಕಾಳಿ, ವೀರುಪಾಕ್ಷ ದಾನಮ್ಮನವರ, ಬಸವರಾಜ ಕಾಳಿ, ಮಂಜುನಾಥ ಕರುಕಲ್ಲ, ಸುಭಾಸ್ ಹಾವೇರಿ, ಸುಭಾಸ ಕಾಡಮ್ಮನವರ, ಯಲ್ಲಪ್ಪ ಕಾಳಿ ಸೇರಿದಂತೆ ಮುಂತಾದವರು ಪಕ್ಷ ಸೇರ್ಪಡೆ ಗೊಂಡರು. ಇವರನ್ನು ತಮ್ಮ ನಿವಾಸದಲ್ಲಿ ಪಕ್ಷದ ಶಾಲು ಹೊದಿಸಿ ಎಮ್ ಆರ್ ಪಾಟೀಲ ರು  ಬರಮಾಡಿಕೊಂಡರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.