ಸ್ನೇಹಿತನ ಮೂಲಕ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ – ಸ್ನೇಹಿತನೊಂದಿಗೆ ಜೈಲು ಸೇರಿದ ಪ್ರವೀಣ್ ಕುಮಾರ್…..

Suddi Sante Desk
ಸ್ನೇಹಿತನ ಮೂಲಕ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ – ಸ್ನೇಹಿತನೊಂದಿಗೆ ಜೈಲು ಸೇರಿದ ಪ್ರವೀಣ್ ಕುಮಾರ್…..

ರಾಯಚೂರು

ಸ್ನೇಹಿತನ ಮೂಲಕ ಲಂಚ ಪಡೆಯುವಾಗ ಭೂಮಾಪಕರೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ‌. ಹೌದು ಜಮೀನಿನ ನಕ್ಷೆ ನೀಡಲು ಹಣದ ಬೇಡಿಕೆ ಇಟ್ಟಿದ್ದ ಭೂಮಾಪಕ ಲೋಕಟಯುಕ್ತ ಬಲೆಗೆ ಬಿದ್ದು ಟ್ರ್ಯಾಪ್ ಆಗಿದ್ದಾನೆ.

ಬಂಧಿತ ಸರ್ವೇಯರ್ ಪ್ರವೀಣ್ ಕುಮಾರ್ ನಾಗಿದ್ದು ಲಿಂಗಸ್ಗೂರು ತಾಲ್ಲೂಕಿನ ಗುರುಗುಂಟಾ ದಲ್ಲಿನ ಸರ್ವೇ ನಂ. 406 ರ ನಕ್ಷೆ ನೀಡಲು ಲಂಚದ ಬೇಡಿಕೆ ಇಟ್ಟಿದ್ದನು.ಸರ್ವೇಯರ್ ಪ್ರವೀಣಕುಮಾರ್ ಸ್ನೇಹಿತನ ಮೂಲಕ ಹಣ ಪಡೆಯುವಾಗ ಬಂಧನವಾಗಿದೆ.

ರಾಯಚೂರು ಲೋಕಾಯುಕ್ತ ಅಧಿಕಾರಿ ಹನುಮಂತ ರಾಯ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಲಿಂಗಸ್ಗೂರಿನ ಖಾಸಗಿ ಆಸ್ಪತ್ರೆ ಬಳಿ ಲಂಚಕೋರನನ್ನ ಬಂಧಿಸಿದ್ದಾರೆ ಅಧಿಕಾರಿ ಗಳು.

ಸುದ್ದಿ ಸಂತೆ ನ್ಯೂಸ್ ರಾಯಚೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.