ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ ವಿಚಾರದಲ್ಲಿ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಅಧಿಕಾರಿಗಳಂತೆ ಇವರಿಗೂ ಕೂಡಾ ಇನ್ನೂ ಮುಂದೆ ಭಡ್ತಿ ಸಿಗಲಿದೆ ಈ ಕುರಿತು ನಿನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯ ವನ್ನು ತೆಗೆದುಕೊಳ್ಳಲಾಗಿದೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟದ ಸಭೆಯಲ್ಲಿ ಇನ್ನೂ ಮುಂದೆ ಹುದ್ದೆಗಳ ಆಧಾರದ ಮೇಲೆ ಭಡ್ತಿ ನೀಡಲು ತೀರ್ಮಾನ ವನ್ನು ತಗೆದುಕೊಂಡಿದ್ದು ಇದರಿಂದಾಗಿ ಕಳೆದ ಕೆಲ ದಿನಗಳಿಂದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಈ ಒಂದು ನಿರ್ಧಾರ ದಿಂದ ಅನುಕೂಲ ಆಗಲಿದೆ
ಇನ್ನೂ ಈ ಒಂದು ನಿರ್ಧಾರ ದಿಂದಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ಆಗಲಿದ್ದು ರಾಜ್ಯದ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ವರಿಗೂ ಧನ್ಯವಾದಗ ಳೊಂದಿಗೆ ಅಭಿನಂದನೆ ಸಲ್ಲಿಸಿದರು
ವರದಿ – ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಡೆಸ್ಕ್