ಬಾಳೆ ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ

Suddi Sante Desk

ಅಪರಿಚಿತನೋರ್ವ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಆ್ಯಸಿಡ್ ಹಾಕಿದ್ದಾನೆ. ಯಾಸ್ಮೀನ್ ಎಂಬ ಮಹಿಳೆಯ ಮೇಲೆ ಆ್ಯಸಿಡ್ ಚೆಲ್ಲಿ ಪರಾರಿಯಾಗಿದ್ದಾನೆ. ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ. ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶಾಹು ಮಹಾರಾಜ ವೃತ್ತದ ಬಳಿ ಈ ಒಂದು ಘಟನೆ ನಡೆದಿದೆ‌.ರಸ್ತೆ ಪಕ್ಕದಲ್ಲಿ ಮಹಿಳೆ ಬಾಳೆ ಹಣ್ಣು ಮಾರಾಟ ಮಾಡುತ್ತಿದ್ದಳು.

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶಾಹು ಮಹಾರಾಜ ವೃತ್ತದ ಬಳಿ ಬಾಳೆ ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್ ಹಾಕಲಾಗಿದೆ. ಪಟ್ಟಣದ ಯಾಸ್ಮೀನ್ ತಹಶಿಲ್ದಾರ (35) ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ. ಇಲ್ಲಿನ ಶಾಹುಮಹಾರಾಜ ವೃತ್ತದ ಬಳಿ ಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್ ಮೇಲೆ ಆ್ಯಸಿಡ್ ಚೆಲ್ಲಿ ಪರಾರಿಯಾಗಿದ್ದಾನೆ. ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಆ್ಯಸಿಡ್ ದಾಳಿಗೆ ತುತ್ತಾಗಿ ನರಳುತ್ತಿರವ ಮಹಿಳೆ
ಈಕೆಯ ನರಳಾಟ ಕೇಳಿದ ಸ್ಥಳೀಯರು ನೀರು ಸಿಂಪಡಿಸಿ, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.