ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ಬೆಂಕಿ ಪಾಲಾಯಿತು ಕಬ್ಬು ಬೆಳೆ

Suddi Sante Desk

ಕಲಘಟಗಿ –

ಶಾರ್ಟ್ ಸರ್ಕ್ಯೂಟ್‌‌ನಿಂದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು, ಸುಮಾರು 180 ಟನ್ ಕಬ್ಬು ಸುಟ್ಟು ಕರಕಲಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.

ತಾಲೂಕಿನ ರುಸ್ತುಂಸಾಬ್ ಕೆರೆಯ ಪಕ್ಕದ ಪ್ರಕಾಶ ಚಿನ್ನಪ್ಪ ದೂಪದ ಎಂಬುವವರಿಗೆ ಸೇರಿದ ರೈತನ ಹೋಲದಲ್ಲಿ ಈ ಘಟನೆ ನಡೆದಿದೆ. ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಪ್ರಕಾಶ ರೈತ ಆರೋಪಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೊಲದಲ್ಲಿ ಇರುವ ಕೆಇಬಿ ಲೈನ್‌ಗಳನ್ನು ಸರಿಪಡಿಸಲು ಮನವಿ ಮಾಡಿದರು.

ಆದರೂ ಕೆ ಇ ಬಿ ಅಧಿಕಾರಿಗಳು ಮಾತ್ರ ಯಾವುದೆ ದುರಸ್ಥಿಗೆ ಮುಂದಾಗಿದಿಲ್ವಂತೆ, ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾನು ಕಷ್ಟ ಪಟ್ಟ ಬೆಳೆದ ಬೆಳೆ ಈಗ ಕೈ ತಪ್ಪಿ ಹೋಗಿದ್ದು, ರೈತ ಪ್ರಕಾಶ ಕಣ್ಣಿರು ಹಾಕುತ್ತಿದ್ದಾರೆ. ಈ ಕೂಡಲೇ ಹೆಸ್ಕಾಂ ಹಾಗೂ ತಹಶೀಲದಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಮಗೆ ಪರಿಹಾರ ಕೋಡಿಸಬೇಕು ಎಂದು ರೈತ ಅಗ್ರಹಿಸುತ್ತಿದ್ದಾನೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.