ಹೊಸಪೇಟೆ –
ಈಜಲು ಹೋಗಿದ್ದ 6 ವಿದ್ಯಾರ್ಥಿಗಳಲ್ಲಿ ಮೂವರು ನೀರು ಪಾಲಾದ ಘಟನೆ ಹೊಸ ಪೇಟೆಯಲ್ಲಿ ನಡೆದಿದೆ.ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ. ಕಾಲುವೆಯಲ್ಲಿ ಈಜಲು ಹೋಗಿದ್ದ ಆರು ವಿದ್ಯಾರ್ಥಿಗಳ ಪೈಕಿ ಮೂವರು ನೀರು ಪಾಲಾಗಿದ್ದಾರೆ.
ಈ ಒಂದು ದಾರುಣ ಘಟನೆಯಿಂದಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ಚಿತ್ರಣ ಸಾಕ್ಷಿಯಾಗಿ ನಡೆದಿದೆ.ಇನ್ನೂ ಘಟನೆಯಲ್ಲಿ ಮೂವರು ಮೃತರಾಗಿದ್ದು ಇನ್ನೂ ಮೂವರು ಬದುಕುಳಿದಿ ದ್ದಾರೆ.ಮೃತರನ್ನು ಹೊಸಪೇಟೆಯ ಹಾಗೂ ಕೊಪ್ಪಳದ ನಿವಾಸಿಗಳಾದ ಯಶವಂತ್, ಅಂಜಿನಿ,ಗುರುರಾಜ್ ಎಂದು ಗುರುತಿಸಲಾಗಿದೆ.
ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಓದುತ್ತಿದ್ದ 6 ವಿದ್ಯಾರ್ಥಿಗಳ ತಂಡ ಈಜಲು ಹೋಗಿತ್ತು.ಈ ವೇಳೆ ಮೂವರು ನೀರಿನಲ್ಲಿ ಮಳುಗಿದ್ದಾರೆ. ಇನ್ನು ಮೂವರು ಬದುಕುಳಿದಿ ದ್ದಾರೆ ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಹೊಸಪೇಟೆಯ ಗ್ರಾಮೀಣ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.ಇತ್ತ ಬದುಕುಳಿದಿರುವ ಮೂವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹೊಸಪೇಟೆ…..