ಕುತೂಹಲಕ್ಕೆ ಕಾರಣವಾದ ಹಳ್ಳಿ ಹಕ್ಕಿ ಸುದ್ದಿಗೋಷ್ಠಿ

Suddi Sante Desk

ಹುಬ್ಬಳ್ಳಿ –

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಧಿಡೀರ್ ಸುದ್ದಿಗೋಷ್ಠಿ ಕರೆದಿದ್ದಾರೆ ‌.ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಗೋಷ್ಠಿಯನ್ನು ಕರೆದಿದ್ದು ಧಿಡೀರ್ ನೇ ಕರೆದ ಈ ಒಂದು ಪ್ರೆಸ್ ಮೀಟ್ ಕುತೂಹಲಕ್ಕೆ ಕಾರಣವಾಗಿದೆ‌.

ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಗೊಂಡಿದ್ದ ಎಚ್. ವಿಶ್ವನಾಥ ಮತ್ತೆ ಹೊಸ ಬಾಂಬ್ ಸಿಡಸ್ತಾರಾ ಎಂಬ ಕುತೂಹಲ ಹುಟ್ಟಿಸಿದೆ.ಮೊನ್ನೆಯಷ್ಟೆ ಮುಖ್ಯಮಂತ್ರಿಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು.ಭ್ರಷ್ಟರು, ದಲ್ಲಾಳಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಅಂತ ಆರೋಪಿಸಿದ್ದರು.

ಸಿಡಿ ಇಟ್ಕೊಂಡು ಬ್ಲಾಕ್ಮೇಲ್ ಮಾಡ್ತಿದ್ದಾರೆ ಅಂತ್ಲೂ ಆರೋಪಿಸಿದ್ರು ವಿಶ್ವನಾಥ. ಅಲ್ಲದೇ ಸಂಕ್ರಾಂತಿ ಬಳಿಕ ಸಿಡಿ ಬಿಡುಗಡೆ ಆಗುತ್ತೆ ಅಂದಿದ್ದರು ಇವರು.ಇಷ್ಟೆಲ್ಲದರ ನಡುವೆ ಈಗ ಕುತೂಹಲ ಮೂಡಿಸಿದ ಎಚ್. ವಿಶ್ವನಾಥ್ ನಡೆ.ಸಿಡಿ ಬಿಡುಗಡೆ ಸಾಧ್ಯತೆನಾ ಇಲ್ಲವೇ ಮತ್ತೇನು ಹೇಳ್ತಾರೆ ಅಥವಾ ಏನಾದರೂ ಹೊಸ ಬಾಂಬ್ ಹಾಕ್ತಾರೆ ಎಂಬುದನ್ನು ಬೆಳಿಗ್ಗೆ 9;15ಕ್ಕೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.