ವಿಮಾನ ನಿಲ್ದಾಣದಲ್ಲಿ ಜಡೆ ಜಗಳ

Suddi Sante Desk

ಬೆಳಗಾವಿ –

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಬಿಜೆಪಿ ನಾಯಕಿಯರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.ಸ್ವಾಗತ ಸಮಿತಿಯಲ್ಲಿ ರಾತ್ರೋರಾತ್ರಿ ಹೆಸರನ್ನು ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೆಲವೆ ಕ್ಷಣದಲ್ಲಿ ಅಮಿತ್ ಶಾ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ನಾಯಕ, ನಾಯಕಿಯರು ತೆರಳಿದ್ದು, ವಿಮಾನ ನಿಲ್ದಾಣದ ಒಳಗೆ ಡಾ.ಸೋನಾಲಿ ಸೋರ್ನಾಬತ್ ತೆರಳಿದ್ದಾರೆ.ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಸೋನಾಲಿ ಸೋರ್ನಾಬತ್ ಮತ್ತು ದೀಪಾ ಕುಡಚಿ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ದೀಪಾ ಕುಡಚಿ

ಸ್ವಾಗತಿ ಸಮಿತಿಯಲ್ಲಿ ನಿನ್ನೆ ಸೋರ್ನಾಬತ್ ಹೆಸರು ಇರಲಿಲ್ಲ. ಆದ್ರೆ ರಾತ್ರೋರಾತ್ರಿ ಅವರ ಹೆಸರನ್ನು ಸೇರಿಸಲಾಗಿದೆ. ಮಾಜಿ ಶಾಸಕ ಸಂಜಯ ಪಾಟೀಲ ಅವರು ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಹೀಗಾಗಿ ಇಬ್ಬರು ಮಹಿಳೆಯರ ನಡುವೆ ಜಗಳ ನಡೆದಿದೆ.

ಸೋನಾಲಿ

ಕಳೆದ 20 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ದೀಪಾ ಗರಂ ಆಗಿದ್ದಾರೆ.ಸಧ್ಯಕ್ಕೆ ಇಬ್ಬರನ್ನೂ ಬಿಜೆಪಿ ನಾಯಕರು ಸಮಾಧಾಬ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.