ದೇಸಾಯಿ ಪರಿವಾರದಿಂದ ರಾಮ ಮಂದಿರಕ್ಕೆ ದೇಣಿಗೆ

Suddi Sante Desk

ಧಾರವಾಡ –

ಧಾರವಾಡದ ಹಂಗರಕಿ ಗ್ರಾಮದ ದೇಸಾಯಿ ಪರಿವಾರದಿಂದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಾಯಿತು.

ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣದ “ನಿಧಿ ಸಮರ್ಪಣಾ ಅಭಿಯಾನದ” ಅಂಗವಾಗಿ ಹಂಗರಕಿಯ ದೇಸಾಯಿ ಮನೆತನ ದಿಂದ ಮಾಜಿ ಶಾಸಕರಾದ ಅಯ್ಯಪ್ಪ ದೇಸಾಯಿ ಅವರು ತಲಾ 1,11,111 ರೂಪಾಯಿ

ಹಾಗೂ ಶಾಸಕರಾದ ಅಮೃತ ದೇಸಾಯಿ ಅವರು 1,11,111 ರೂಪಾಯಿ ಹಾಗೂ ಅಶೋಕ ದೇಸಾಯಿಯವರು 51,000 ರೂಪಾಯಿ ದೇಣಿಗೆ ನಿಧಿಯನ್ನು ನೀಡಿದರು. ಆದಷ್ಟು ಬೇಗನೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂದು ಶುಭ ಹಾರೈಸಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.