ಆತ್ಮಹತ್ಯೆಗೆ ಯತ್ನಿಸಿದವನನ್ನು ಬದುಕಿಸಿದ 108 ಸಿಬ್ಬಂದಿ – ಧಾರವಾಡ ಶ್ರೀನಗರ ರೈಲ್ವೆ ಟ್ರ್ಯಾಕ್ ನಲ್ಲಿ ಅವಘಡ

Suddi Sante Desk

ಧಾರವಾಡ –

ರೇಲ್ವೆ ಟ್ಯಾಕ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಯುವಕನನ್ನು ಧಾರವಾಡದಲ್ಲಿ ರಕ್ಷಣೆ ಮಾಡಲಾಗಿದೆ.

ಧಾರವಾಡದ ಶ್ರೀನಗರ ಕ್ರಾಸ್ ನಲ್ಲಿರುವ ರೇಲ್ವೆ ಟ್ಯಾಕ್ ನಲ್ಲಿ ಈ ಒಂದು ಘಟನೆ ನಡೆದಿದೆ. 40 ವರ್ಷದ ಕಲ್ಲಯ್ಯ ಕುಂಬಿ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿ ಬದುಕಿರುವ ವ್ಯಕ್ತಿಯಾಗಿದ್ದಾರೆ.

ನಗರದ ಮಾಳಾಪೂರ ಬಡಾವಣೆಯ ನಿವಾಸಿಯಾ ಗಿದ್ದಾರೆ‌. ತೀವ್ರವಾಗಿ ಗಾಯಗೊಂಡಿದ್ದು ಕಾಲು ಸೇರಿದಂತೆ ಹಲವು ಭಾಗಗಳಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ 108 ಸಿಬ್ಬಂದಿ ದಾಖಲು ಮಾಡಿದ್ದಾರೆ.

ಇನ್ನೂ ಈ ಕುರಿತು ಪೊನ್ ಕರೆ ಬರುತ್ತಿದ್ದಂತೆ ಮೊಹಮ್ಮದ ಶಫಿ ದಫೇದಾರ ಇವರ ಮಾರ್ಗದರ್ಶನದಲ್ಲಿ108 ಸಿಬ್ಬಂದಿಗಳಾದ ಶಾಂತೇಶ ಪೈಲಟ್ ಲೊಕೇಶ ಪಾಟೀಲ ಕಾರ್ಯಾಚರಣೆ ಮಾಡಿ ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.