ರಾಮ ಮಂದಿರ ಹೆಸರಿನಲ್ಲಿ ನಕಲಿ ಬಿಲ್ ಕೊಟ್ಟು ಹಣ ಪಡೆಯುತ್ತಿದ್ದ ಯುವಕ ಅಂದರ್

Suddi Sante Desk

ಮಧ್ಯಪ್ರದೇಶ –

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ನಕಲಿ ಚೀಟಿಗಳನ್ನು ಮುದ್ರಣ ಮಾಡಿ ಹಣ ತಗೆದುಕೊಳ್ಳುವಾಗ ಸಿಕ್ಮಿ ಬಿದ್ದಿದ್ದಾನೆ.ಹೌದು ಮಧ್ಯಪ್ರದೇಶದ ಭೂಪಾಲ್ ನಲ್ಲಿ ವ್ಯಕ್ತಿಯೊಬ್ಬ ರಾಮ ಮಂದಿರದ ಹೆಸರಲ್ಲಿ ನಕಲಿ ಚೀಟಿಗಳನ್ನ ನೀಡಿ ದೇಣಿಗೆ ಸಂಗ್ರಹಿಸುವಾಗ ಪೊಲೀಸರ ಕೈಗೆ ಸಿಕ್ಕು ಈಗ ತಪ್ಪಿಗೆ ಜೈಲು ಪಾಲಾಗಿದ್ದಾನೆ.

ಮನೀಶ್ ರಜಪೂತ್ ಎಂಬಾತ ಅಂಗಡಿಗಳ ಮಾಲೀಕರಿಗೆ ನಕಲಿ ರಶೀದಿಗಳನ್ನ ನೀಡಿ ಹಣ ಸಂಗ್ರಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ರಾಜೇಶ್ ಭದೋರಿಯಾ ಹೇಳಿದ್ದಾರೆ.ಅಲ್ಲದೇ ನಕಲಿ ಚೀಟಿ ಗಳೊಂದಿಗೆ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ರಜಪೂತ್ ನ ಕಳ್ಳಾಟದ ಬಗ್ಗೆ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂಕ್ತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಿಶ್ವ ಹಿಂದೂ ಪರಿಷತ್ ಮುಖಂಡ ಯತೇಂದ್ರ ಪಾಲ್ ಸಿಂಗ್ ಈ ಪ್ರಕರಣದಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.