ಡಿವೈಡರ್ ಗೆ ಬೈಕ್ ಡಿಕ್ಕಿ – ಆಸ್ಪತ್ರೆಯಲ್ಲಿ ಬೈಕ್ ಸವಾರ ಸಾವು ಇನ್ನೊರ್ವ ಗಾಯ

Suddi Sante Desk

ಧಾರವಾಡ –

ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರೊಬ್ಬ ಸಾವಿಗೀಡಾದ ಘಟನೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದಿದೆ. ಕೃಷಿ ವಿವಿ ಮುಂದಿನ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿದೆ.

ಬೆಳಗಾವಿ ಯಿಂದ ಧಾರವಾಡ ಕಡೆಗೆ ಬೈಕ್ ನಲ್ಲಿ ಇಬ್ಬರು ಬರುತ್ತಿದ್ಧರು. ವೇಗವಾಗಿ ಬರುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿಯಾಗಿದೆ‌. ತೀವ್ರವಾಗಿ ಗಾಯಗೊಂಡ ಸುರೇಶ್ ದೂಳಪ್ಪನವರ ಮತ್ತು ಬಸವಂತಪ್ಪ ಕುಸುಗಲ್ಲ್ ‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ತೀವ್ರವಾಗಿ ಗಾಯಗೊಂಡಿದ್ದ ಬಸವಂತಪ್ಪ ಆಸ್ಪತ್ರೆಯಲ್ಲಿ ಸಾವಿಗೀಡಾದರು. ಇನ್ನೂ ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆ ASI ಎಸ್ ಡಿ ಶಿಂಧೆ,ಮತ್ರು ಸಿಬ್ಬಂದಿಗಳಾದ ಎಮ್ ಎಮ್ ಹೊಸಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದರಲ್ಲಿ ಸುರೇಶ್ ದೂಳಪ್ಪನವರ ನಗರದ KVG ಬ್ಯಾಂಕ್ ನೌಕರರಾಗಿದ್ದರೆ ಇನ್ನೂ ಮೃತ ಬಸವಂತಪ್ಪ ಖಾಸಗಿ ಕಾರು ಚಾಲಕರಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.