ನಕಲಿ ದಾಖಲೆಗಳನ್ನು ನೀಡಿ ನೌಕರಿ ಪಡೆದುಕೊಂಡಿದ್ದ ನಾಲ್ವರು ಲೈನ್ ಮ್ಯಾನ್ ಗಳ ವಿರುದ್ಧ FIR

Suddi Sante Desk

ಬೆಂಗಳೂರು –

ಬೆಸ್ಕಾಂಗೆ ನಕಲಿ ಅಂಕಪಟ್ಟಿ ಸಲ್ಲಿಸಿ ವಂಚನೆ ಮಾಡಿದ್ದ ಆರೋಪದಡಿ ನಾಲ್ವರು ಲೈನ್‍ಮ್ಯಾನ್‍ ಗಳ ವಿರುದ್ಧ ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಬೆಸ್ಕಾಂನ ಎಚ್‍ಎಸ್‍ಆರ್ ಲೇಔಟ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಲ್. ಜ್ಯೋತಿಪ್ರಕಾಶ್ ಎಂಬವರು ದೂರು ಸಲ್ಲಿಸಿದ್ದು, ಇದರನ್ವಯ ಹಾಲಿ ಲೈನ್‍ಮ್ಯಾನ್‍ಗಳಾದ ಆನಂದಖುಡೆ, ಎನ್.ಸುಬ್ರಮಣಿ, ಡಿ.ಸಿ. ಚಂದ್ರಶೇಖರ ಮತ್ತು ಶ್ರೀಕಾಂತ ಬಡಿಗೇರ ಎಂಬುವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಸಹಾಯಕ ಲೈನ್‍ಮ್ಯಾನ್ ಹುದ್ದೆಗೆ ನೇಮಕಾತಿ ವೇಳೆ ಈ ನಾಲ್ವರು ಆರೋಪಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಬೆಸ್ಕಾಂಗೆ ನಂಬಿಸಿ ವಂಚನೆ ಗೈದಿದ್ದು, ಇವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.