ಕೈ ಶಾಸಕರ ಊರಿನಲ್ಲಿ ನೀರಿಗಾಗಿ ಹಾಹಾಕಾರ ಬೇಸತ್ತ ಮಹಿಳೆಯ ರಿಂದ ಗ್ರಾಮ ಪಂಚಾಯತಿಗೆ ಬೀಗ

Suddi Sante Desk

ಹುಬ್ಬಳ್ಳಿ –


ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬೇಸತ್ತ ಮಹಿಳೆಯರು ಗ್ರಾಮ ಪಂಚಾಯತಿ ಗೆ ಬೀಗ ಹಾಕಿದ ಘಟನೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ‌ನಡೆದಿದೆ‌.

ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ತಲೆದೊರಿತ್ತು ಈ ಒಂದು ಸಮಸ್ಯೆ ಕುರಿತು ಗ್ರಾಮಸ್ಥರು ಹೇಳಿ ಹೇಳಿ ಬೇಸತ್ತಿದ್ದರು.ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದು ಬೇಸತ್ತು ಗ್ರಾಮದ ಗ್ರಾಮ ಪಂಚಾಯತಿಗೆ ಬೀಗ ಹಾಕಿದ್ದಾರೆ.

ಈ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು ಇನ್ನೂ ಪ್ರಮುಖವಾಗಿ ಈ ಒಂದು ಗ್ರಾಮ ಕಾಂಗ್ರೆಸ್ ಪಕ್ಷದ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಊರು ಇದಾಗಿದ್ದು ಇವರ ಊರಿನಲ್ಲಿಯೇ ಈ ಒಂದು ಸಮಸ್ಯೆಯಾದರೆ ಇನ್ನೂ ಕ್ಷೇತ್ರದ ಉಳಿದ ಗ್ರಾಮದಲ್ಲಿ ಹೇಗಿದೆ ಎಂಬ ಕುರಿತು ಮಾತುಗಳು ಕೇಳಿಬರುತ್ತಿದ್ದವು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.