ಬಾರ್ ಮುಂದೆ ಗ್ರಾಮಸ್ಥರ ಪ್ರತಿಭಟನೆ – ಬಂದ್ ‌ಮಾಡುವಂತೆ ಪಟ್ಟು ಹಿಡಿದ ಗ್ರಾಮಸ್ಥರು

Suddi Sante Desk

ಧಾರವಾಡ –

ಗ್ರಾಮದಲ್ಲಿ ಹೊಸದಾಗಿ ಬಾರ್ ಆರಂಭವನ್ನು ವಿರೋಧಿಸಿ ಧಾರವಾಡದ ತಿರ್ಲಾಪೂರ ಗ್ರಾಮದಲ್ಲಿ ಪ್ರತಿಭಟನೆ ನಡೆಯುತ್ತಿದೆ.ಜಿಲ್ಲೆಯ ನವಲಗುಂದ ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ಈ ಒಂದು ಹೋರಾಟ ನಡೆಯುತ್ತಿದೆ.

ಗ್ರಾಮದಲ್ಲಿ ಅಶೋಕ ಬಾರ್ ಮತ್ತು ರೆಸ್ಟೋರೆಂಟ್ ನ್ನು ಹೊಸದಾಗಿ ಆರಂಭ ಮಾಡಲಾಗಿದೆ. ಇದರಿಂದ ಈ ಒಂದು ಬಾರ್ ನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡತಾ ಇದ್ದಾರೆ.

ಗ್ರಾಮದಲ್ಲಿ ಹೊಸದಾಗಿ ಆರಂಭ ಮಾಡಲಾಗಿರುವ ನೂತನ ಮಧ್ಯದ ಅಂಗಡಿಯನ್ನು ಯಾವುದೇ ಕಾರಣಕ್ಕೂ ಆರಂಭ ಮಾಡದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು ವಿರೇಶ ಸೊಬರದಮಠ ಅವರ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡ ಲಾಗುತ್ತಿದೆ.

ಸಧ್ಯ ಬಾರ್ ಮುಂದೆ ಪ್ರತಿಭಟನೆ ಮಾಡಲಾಗುತ್ತಿದ್ದು ಇತ್ತ ಆರಂಭಕ್ಕೆ ಅನುಮತಿ ತಗೆದುಕೊಂಡ ಮಳಿಗೆ ಯ ಮಾಲೀಕರು ಮುಂದೇನು ಮಾಡತಾರೆ ಎಂಬು ದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.