ಧಾರವಾಡದಲ್ಲಿ ಪೊಲೀಸರು ಹೀಗ್ಯಾಕೆ ಮಾಡಿದರು ಪೊಲೀಸರಿ ಗೆ ಮಾನವೀಯತೆ ಇಲ್ವಾ – ಈ ಒಂದು ಸ್ಟೋರಿ ನೋಡಿ…..

Suddi Sante Desk

ಧಾರವಾಡ

ಸಾಮಾನ್ಯವಾಗಿ ಪೊಲೀಸರಿಗೆ ಮಾನವಿಯತೆ ಇದೆ ಎಂಬಂತೆ ಮಾತುಗಳು ಈಗಲೂ ಕೂಡಾ ಸತ್ಯವಾಗಿ ಕಂಡು ಬರುತ್ತವೆ ಆದರೆ ಧಾರವಾಡದಲ್ಲಿ ಮಾತ್ರ ಈ ಒಂದು ಅಪವಾದ ಎಂಬಂತೆ ಕಂಡು ಬಂದಿತು. ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋರಟಿದ್ದ ವ್ಯಕ್ತಿಯೊಬ್ಬ ಅಪ್ಪಿ ತಪ್ಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬೆಳಿಗ್ಗೆ 8 ಗಂಟೆಗೆ ಕೆಸಿ ಪಾರ್ಕ್ ಬಳಿ ಪರಿಶೀಲನೆ ಮಾಡುವಾಗ ಎಸಿಪಿ ಮೇಡಂ ಬಳಿ ಸಿಕ್ಕಿ ಬಿದ್ದ .

ನಂತರ ನೋಡಿ ಇವರನ್ನು ಪರಿಶೀಲನೆ ಮಾಡಿ ಅಂತಾ ಮೇಡಂ ಹೇಳಿ ಕೆಲ ಸಮಯದ ನಂತರ ಮುಂದೆ ಹೋದರು.ಬೆಳಿಗ್ಗೆ ಎಂಟು ಗಂಟೆಗೆ ತಮ್ಮ ತಾಯಿಯನ್ನು ಕರೆದುಕೊಂಡು ಬಂದ ವ್ಯಕ್ತಿ ಮಧ್ಯಾ ಹ್ನ 1 ಗಂಟೆಯಾದರೂ ಮುಕ್ತಿ ಸಿಗಲಿಲ್ಲ. ಹೌದು ದಮ್ಮಯ್ಯಾ ತಪ್ಪಾಗಿದೆ ಕೈ ಮುಗಿತೇನಿ ಕಾಲು ಮುಗಿ ತೇನಿ ನಮ್ಮ ತಾಯಿಯವರನ್ನು ಒಮ್ಮೇ ನೋಡಿ ಪ್ಲೀಸ್ ಅಂತಾ ಏನೇ ಹೇಳಿದರು ಕೇಳಿದರು ಪೊಲೀ ಸರ ಮನಸ್ಸು ಮಾತ್ರ ಕರಗಲಿಲ್ಲ. ಹೇ ಹೋಗರಿ ನಾವೇನು ಮಾಡೋಣಾ ಎಸಿಪಿ ಮೇಡಂ ಅವರಿಗೆ ಹೇಳಿ ಅಂತಾ ಹಾರಿಕೆಯ ಮಾತು ಉತ್ತರ ಕೋಡು ತ್ತಾ ಸತಾಯಿಸಿ ಸತಾಯಿಸಿ ಹೇಳಿದರು. ಒಂದು ಕಡೆ ವಯಸ್ಸಾದ ಹಿರಿಯ ಜೀವಿ ಕಣ್ಣೀರಿಡುತ್ತಾ ಕುಳಿತು ಕೊಂಡಲ್ಲೇ ಕುಳಿತುಕೊಂಡಿದ್ದು ಇನ್ನೊಂದು ಕಡೆ ಸರ್ ಮೇಡಂ ಪ್ಲೀಸ್ ನಮ್ಮ ತಾಯಿಯವರ ಪರಸ್ಥಿ ತಿ ಒಮ್ಮೇ ನೋಡಿ ಎಂದರು ಯಾರು ನೋಡಲಿಲ್ಲ ಕೇಳಲಿಲ್ಲ.ಕೊನೆಗೆ ಸುದ್ದಿ ಸಂತೆಯ ವರದಿಗಾರ ಮಂಜುನಾಥ ಬಡಿಗೇರ ಮತ್ತು ಮಂಜುನಾಥ ಸುರವಿ ಸ್ಥಳಕ್ಕೆ ಹೋಗಿ ರಸ್ತೆ ಪಕ್ಕದಲ್ಲಿಯೇ ಕುಳಿತು ಕೊಂಡಿದ್ದ ಅಜ್ಜಿಯ ನೋವಿ ನ ಕುರಿತು ವರದಿ ಮಾಡಲು ಮುಂದಾದರು. ಅಲ್ಲ ದೇ ಪೊಟೊ ತಗೆಯುತ್ತಿದ್ದಂತೆ ಎಚ್ಚೇತ್ತುಕೊಂಡು ಸ್ಥಳದಲ್ಲಿದ್ದ ಪೊಲೀಸರು ಏನೇನೋ ಸುಳ್ಳು ಹೇಳಿ 5 ಗಂಟೆಯ ನಂತರ ಸ್ಥಳದಿಂದ ಬಿಟ್ಟು ಕಳಿಸಿದರು. ಏನೇ ಆಗಲಿ ಪೊಲೀಸರಲ್ಲೂ ಮಾನವಿಯತೆ ಇದೆ ಎಂಬ ಮಾತು ಈಗಲೂ ಸತ್ಯವಾಗಿದೆ ಆದರೆ ಧಾರ ವಾಡದಲ್ಲಿನ ಈ ಒಂದು ಚಿತ್ರಣವನ್ನು ನೋಡತಾ ಇದ್ದರೇ ಯಾಕೋ ನಮ್ಮ ಧಾರವಾಡದಲ್ಲಿನ ಪೊಲೀಸರು ನಡೆದು ಕೊಂಡ ರೀತಿ ನೋಡಿದರೆ ನಿಜವಾಗಿಯೂ ಈ ಒಂದು ವ್ಯಕ್ತಿ ಅನಾರೋಗ್ಯ ಹಿನ್ನಲೆಯಲ್ಲಿ ತಾಯಿ ಯನ್ನು ಕರೆದುಕೊಂಡು ಹೊರಟಿದ್ದ ಕಾರಣ ಕ್ಕಾಗಿ ಹಿಂದೆ ಮುಂದೆ ನೋಡದೆ ಹೀಗೆ ಮಾಡಿದ್ದು ನಿಜಕ್ಕೂ ವಿಷಾದದ ಸಂಗತಿಯಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.