ಗಾಂಜಾ ಮತ್ತಿನಲ್ಲಿದ್ದವರು ಕಿರಾಣಿ ಅಂಗಡಿ ಮೇಲೆ ದಾಳಿ ಅದನ್ನು ತಡಿಯಲು ಬಂದ ಮಹಿಳೆ ಗೆ ಕೂಡಗೊಲಿನಿಂದ ಅಟ್ಯಾಕ್ ತಪ್ಪಿತು ಅವಘಡ ಜನ ಸೇರುತ್ತಲೆ ಎಸ್ಕೇಫ್ ಆದರು…..

Suddi Sante Desk

ಧಾರವಾಡ –

ಗಾಂಜಾ ಮತ್ತಿದ್ದ ಯುವಕರು ಕೈಯಲ್ಲಿ ಕೂಡ ಗೊಲು ಹಿಡಿದುಕೊಂಡು ಕಿರಾಣಿ ಅಂಗಡಿಯ ಮೇಲೆ ಕಲ್ಲು ಎಸೆದು ಅದನ್ನು ರಕ್ಷಣೆ ಮಾಡಲು ಬಂದ ಮಹಿಳೆಗೆ ಅಟ್ಯಾಕ್ ಮಾಡಲು ಮುಂದಾಗಿ ರುವ ಪ್ರಕರಣ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಟೋಲ್ ನಾಕಾದಲ್ಲಿರು ಜನತ್ ನಗರ ದಲ್ಲಿ ಈ ಒಂದು ಘಟನೆ ನಡೆದಿದೆ.ಯುವಕರು ಈ ಒಂದು ರಾದ್ದಾಂತವನ್ನು ಮಾಡಿ ಸಧ್ಯ ಎಸ್ಕೇಫ್ ಆಗಿದ್ದಾರಂತೆ.ಸಂಜೆ ಸಮಯದಲ್ಲಿ ಗಾಂಜಾದಲ್ಲಿದ್ದ ಆ ಯುವಕರು ಬಂದ್ ಆಗಿದ್ದ ಕಿರಾಣಿ ಮೇಲೆ ಮೊದಲು ಕಲ್ಲು ಮತ್ತು ಇಟ್ಟಂಗಿ ಗಳನ್ನು ಹೊಗೆದಿ ದ್ದಾರೆ

ಇದನ್ನು ನೋಡಿದ ಮಹಿಳೆ ಮನೆಯಿಂದ ಹೊರಗೆ ಬಂದು ನಂತರ ಅದನ್ನು ತಡೆಯಲು ಈ ಮಹಿಳೆ ಮುಂದಾಗಿದ್ದಾರೆ. ಕೈಯಲ್ಲಿದ್ದ ಕೂಡಗೊಲಿನಿಂದ ಮಹಿಳೆಯ ಮೇಲೆ ಆ ಯುವಕರು ಅಟ್ಯಾಕ್ ಮಾಡ ಲು ಮುಂದಾಗಿದ್ದಾನೆ.ಇದನ್ನು ನೋಡಿದ ಸಾರ್ವಜ ನಿಕರು ಆ ಯುವಕನನ್ನು ಹಿಡಿಯಲು ಮುಂದಾಗುತ್ತಿ ದ್ದಂತೆ ಅಲ್ಲಿಂದ ಯುವಕರು ಸ್ಥಳದಿಂದ ಕಾಲು ಕಿತ್ತು ಎಸ್ಕೇಫ್ ಆಗಿದ್ದಾರೆ

ಇನ್ನೂ ಈ ಒಂದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೇ ಆಗಮಿಸಿದ ವಿದ್ಯಾಗಿರಿ ಪೊಲೀಸರು ಕಲ್ಲು ಇಟ್ಟಂಗಿ ಹೊಗೆದು ಕೂಡಗೊಲಿನಿಂದ ಅಟ್ಯಾಕ್ ಮಾಡಿದವ ರಿಗಾಗಿ ಹುಡುಕಾಡುತ್ತಿದ್ದಾರೆ.

ಒಟ್ಟಾರೆ ಹಾಡುಹಗಲೇ ಧಾರವಾಡದಲ್ಲಿ ದೊಡ್ಡ ದಾದ ಅವಘಡವೊಂದು ತಪ್ಪಿದಂತಾಗಿದ್ದು ಸಧ್ಯ ವಿದ್ಯಾಗಿರಿ ಪೊಲೀಸರು ಪಿಂಟುನನ್ನು ಹುಡುಕಾಡು ತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.