ಮಹಾಮಾರಿಗೆ ಪೊಲೀಸ್ ಪೇದೆ ಬಲಿ – ಅಗಲಿದ ಹಿರಿಯ ಪೊಲೀಸ್ ಪೇದೆಗೆ ಇಲಾಖೆಯ ಸಿಬ್ಬಂದಿ ಗಳಿಂದ ಭಾವಪೂರ್ಣ ನಮನ

Suddi Sante Desk

ಬೆಂಗಳೂರು –

ಮಹಾಮಾರಿ ಕೊರೊನಾ ಗೆ ಬೆಂಗಳೂರಿನಲ್ಲಿ ಮತ್ತೊರ್ವ ಪೊಲೀಸ್ ಪೇದೆಯೊಬ್ಬರು ಬಲಿಯಾಗಿ ದ್ದಾರೆ.ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 56 ವರ್ಷದ ರೇವಣ್ಣ ಮೃತ ಪೊಲೀಸ್ ಪೇದೆಯಾಗಿದ್ದಾರೆ.

ಹೌದು ಕಾಮಾಕ್ಷಿಪಾಳ್ಯದ ಪೊಲೀಸ್ ಪೇದೆ ರೇವಣ್ಣ (56)ಅವರು ಕೋವಿಡ್-19 ನಿಂದ ನಿಧನರಾಗಿದ್ದಾರೆ‌ ರೇವಣ್ಣನವರು ಪೊಲೀಸ್ ಇಲಾಖೆ ಸೇರುವ ಮೊದ ಲು ಭಾರತೀಯ ಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಇಲಾಖೆಗೆ ಸೇರಿಕೊಂಡಿದ್ದರು.ಇನ್ನೂ ಇವರ ಅಗಲಿಕೆಗೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಕುಮಾರ್ ಪಾಟೀ ಲ್ ಅವರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿ ದ್ದಾರೆ.
 

ಅಲ್ಲದೇ ತೀವ್ರ ದುಃಖವನ್ನುಂಟು ಮಾಡಿದೆ ದೇವರು ಇವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.ಅವರ ಅಗಲಿ ಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ದವರಿಗೆ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.