ಕ್ಷೇತ್ರದ ಜನರಿಗೆ ನೆರವಾಗಲು ಮುಂದಾದ ಮಾಜಿ ಸಚಿವ ಸಂತೋಷ ಲಾಡ್ – ಹಸಿವು ನೀಗಿಸಲು ಅಕ್ಕಿ ವಿತರಣೆಗೆ ಮುಂದಾದ ನಾಯಕ…..

Suddi Sante Desk

ಕಲಘಟಗಿ –

ಕಲಘಟಗಿ ವಿಧಾನ ಸಭಾ ಕ್ಷೇತ್ರದ ಜನತೆಗೆ ಮಾಜಿ ಸಚಿವ ಸಂತೋಷ ಲಾಡ್ ನೆರವು ನೀಡಲು ಮುಂದಾಗಿದ್ದಾರೆ. ಹೌದು ಹಸಿವಿನಿಂದ ಬಳಲುವ ಬಳಲುತ್ತಿರುವ ಕ್ಷೇತ್ರದಲ್ಲಿ‌ನ ಕೂಲಿ ಕಾರ್ಮಿಕರಿಗಾಗಿ ಅಕ್ಕಿ ವಿತರಣೆಗೆಯೊಂದಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಲು ಮಾಜಿ ಸಚಿವಸಂತೋಷ ಲಾಡ್ ಮುಂದಾಗಿದ್ದಾರೆ

ಸಂತೋಷ್ ಲಾಡ್ ಅವರು ಲಾಕ್ ಡೌನ್ ದಿಂದ ಕ್ಷೇತ್ರದಲ್ಲಿ ಹಸಿವಿನಿಂದ ಬಳಲುವ ಕೂಲಿ ಕಾರ್ಮಿ ಕರು, ರೈತರು, ಕೊವಿಡ್ ರೋಗಿಗಳಿಗೆ 2500 ಕ್ವಿಂಟಲ್ ಅಕ್ಕಿ ವಿತರಣೆಯೊಂದಿಗೆ ಉಚಿತವಾಗಿ ಆಹಾತ ಧಾನ್ಯ ವಿತರಣೆ ಮಾಡಲ ಮುಂದಾಗಿದ್ದಾರೆ

ವಿತರಣೆಗಾಗಿ ಈಗಾಗಲೇ ಕಲಘಟಗಿಯಲ್ಲಿರುವ ಮಡಕಿಹೊನ್ನಳ್ಳಿಯಲ್ಲಿರುವ ಅಮೃತ ನಿವಾಸಕ್ಕೆ ಎಲ್ಲಾ ಆಹಾರ ಧಾನ್ಯಗಳನ್ನು ತರಿಸಲಾಗಿದ್ದು ಸಿದ್ದತೆ ಮಾಡಿಕೊಳ್ಳಲಾಗಿದೆ ಇನ್ನೆರಡು ದಿನಗಳಲ್ಲಿ ವಿತರಣೆ ಕಾರ್ಯ ನಡೆಯಲಿದೆ

ಈ ಮೂಲಕ ಮಾಜಿ ಸಚಿವ ಸಂತೋಷ್ ಲಾಡ್ ಕ್ಷೇತ್ರದ ಜನರ ನೆರವಿಗೆ ಮುಂದಾಗಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.