ಅಕ್ರಮವಾಗಿ ಅಕ್ಕಿ ಸಾಗಾಟ ವಾಹನದೊಂದಿಗೆ ವಶ ಪ್ರಕರಣ ದಾಖಲು…..

Suddi Sante Desk

ಗಂಗಾವತಿ –

ಪಡಿತರ ಅಕ್ಕಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಕೊಪ್ಪಳ ದಲ್ಲಿ ಪತ್ತೆ ಮಾಡಲಾಗಿದೆ ಸಾರ್ವಜನಿಕ ವಿತರಣೆಯ ಪಡಿತರ ಅಕ್ಕಿ ಚೀಲ ಗಳನ್ನು ಅಹಾರ ಇಲಾಖೆಯ ಅಧಿಕಾರಿಗಳು ಗಂಗಾವತಿ ನಗರದಲ್ಲಿ ವಶಕ್ಕೆ ಪಡೆದಿದ್ದಾರೆ. ಸಂಗಾಪುರ ಆನೆಗೊಂದಿ ಭಾಗದಲ್ಲಿ ಖರೀದಿಸಿದ ಪಡಿತರ ಅಕ್ಕಿ ಚೀಲಗಳನ್ನು ಗಂಗಾವತಿಗೆ ಸಾಗಿಸು ತ್ತಿದ್ದ ಸಂದರ್ಭದಲ್ಲಿ ನಗರದ ಚೆಕ್ ಪೋಸ್ಟ್ ಬಳಿ ತಹಶೀಲ್ದಾರ್ ಯು.ನಾಗರಾಜ ನೇತೃತ್ವದ ಆಹಾರ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ ಹನ್ನೆರಡು ಕ್ವಿಂಟಲ್ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.

ಆಹಾರ ಇಲಾಖೆಯ ಅಧಿಕಾರಿಗಳಾದ ನಂದ ಪಲ್ಲೇದ್ ದೇವರಾಜ್ ನಗರ ಠಾಣೆಗೆ ಆಗಮಿಸಿ ಅಕ್ರಮ ಪಡಿತರ ಚೀಲಗಳನ್ನು ಸಾಗಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಇನ್ನೂ ಇತ್ತ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.