ಧಾರವಾಡದ ಅಳ್ನಾವರ ದಲ್ಲಿ ಮತಾಂತರ ಪತ್ತೆ ಮಾಡಿದ ಭಜರಂಗ ದಳದ ಕಾರ್ಯಕರ್ತರು

Suddi Sante Desk

ಧಾರವಾಡ –

ಮತಾಂತರ ಯತ್ನ ಆರೋಪವನ್ನು ಧಾರವಾಡದ ಅಳ್ನಾವರ ಪಟ್ಟಣದಲ್ಲಿ ಭಜರಂಗ ದಳದ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ‌.ಹೌದು ಪ್ರಾರ್ಥನೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ಮಾಡಿ ಪತ್ತೆ ಮಾಡಿದ್ದಾರೆ

ಭಜರಂಗ ದಳ ಕಾರ್ಯಕರ್ತರಿಂದ ಈ ಒಂದು ದಾಳಿ ಯಾಗಿದೆ‌.ಅಳ್ನಾವರ ಪಟ್ಟಣದ ಮನೆಯೊಂದರಲ್ಲಿ ನಡೆಯುತ್ತಿದ್ದ ಪ್ರಾರ್ಥನೆ.

ಅಳ್ನಾವರದ ಹಳಿಯಾಳ ರಸ್ತೆಯ ದಯಾಸಾಗರ ನಿವಾಸ ದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು.ಅಳ್ನಾವರ ಮತ್ತು ಸುತ್ತ ಮುತ್ತಲಿನ ಗ್ರಾಮಗಳ‌ ಹಿಂದೂಗಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಹಿಂದೂಗಳನ್ನು ಸೇರಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ದಾಳಿ ಮಾಡಲಾಗಿದೆ.

ಈ ಹಿನ್ನೆಲೆ ಭಜರಂಗ ದಳ ಕಾರ್ಯಕರ್ತರಿಂದ ಈ ಒಂದು ದಾಳಿ ನಡೆದಿದೆ.ಪ್ರಾರ್ಥನೆ ತಡೆದು ಹೆಸರನ್ನು ಕೇಳಿ ಕೇಳಿ ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ ಕಾರ್ಯಕರ್ತರು. ಇತ್ತೀಚೆಗೆ ಮತಾಂತರಗೊಂಡಿರೋ ಕೆಲವರಿಂದ ನಡೆಯು ತ್ತಿತ್ತಂತೆ ಈ ಒಂದು ಪ್ರಾರ್ಥನೆ.ಮುಖ್ಯಮಂತ್ರಿ ಅವರಿಗೆ ನೇರವಾಗಿ ಪ್ರಶ್ನೆ ಮಾಡಿ ತಡೆ ಹಿಡಿಯುವಂತೆ ಆಗ್ರಹ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.