ಧಾರವಾಡದಲ್ಲಿ ACB ಬಲೆಗೆ ಬಿದ್ದ ಅರಣ್ಯ ಇಲಾಖೆಯ ಗಾರ್ಡ್ – ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಟೀಮ್…..

Suddi Sante Desk

ಧಾರವಾಡ –

ಪ್ರಕರಣ ವೊಂದರಲ್ಲಿ ಆರೋಪಿಯ ಹೆಸರನ್ನು ಕೈಬಿಡಲು ಹಣದ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆಯ ಗಾರ್ಡ್ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಧಾರವಾಡ ದಲ್ಲಿ ನಡೆದಿದೆ‌.ಹೌದು ರಘು ಕುರಿ ಎಸಿಬಿ ಬಲೆಗೆ ಬಿದ್ದ ಅರಣ್ಯ ಇಲಾಖೆಯ ಗಾರ್ಡ್ ಆಗಿದ್ದಾರೆ.ಇವರು ಈ ಹಿಂದೆ ಪ್ರಕರಣ ವೊಂದರಲ್ಲಿ ಎರಡು ವಾಹನಗಳನ್ನು ಸೀಜ್ ಮಾಡಿ ನಂತರ ಆ ಒಂದು ಪ್ರಕರಣ ದಲ್ಲಿ ಹೆಸರನ್ನು ಕೈಬಿಡಲು 60 ಸಾವಿರ ಹಣದ ಬೇಡಿಕೆ ಇಟ್ಟಿದ್ದರು ಇಂದು ಹಣವನ್ನು ತೆಗೆದುಕೊಳ್ಳುವಾಗ ಟ್ರ್ಯಾಪ್ ಮಾಡಲಾಗಿದೆ.

ಇನ್ನೂ ಪ್ರಮುಖವಾಗಿ ಹಣವನ್ನು ತಗೆದುಕೊಂಡು ಕಾರಿನಲ್ಲಿ ವೇಗವಾಗಿ ಹೊರಟಿದ್ದರು.ಇನ್ನೇನು ಎಸ್ಕೇಪ್ ಆಗುವಷ್ಟರಲ್ಲಿ ಎಸಿಬಿ ಅಧಿಕಾರಿ ಗಳು ಸಿನೀಮಿಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಗಾರ್ಡ್ ನನ್ನು ವಾಹನದ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.ಎಸ್ಪಿ ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೇಣು ಗೋಪಾಲ ಮತ್ತು ಇತರೆ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.