ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲೂ ಆಯುಧ ಪೂಜೆ – ಮುಸ್ಲಿಂ ಸಮಾಜದ ಅಧಿಕಾರಿಯಿಂದ ಪೂಜೆ ಭಾವೈಕ್ಯತೆ ಸಾಕ್ಷಿಯಾಯಿತು ಜಿಲ್ಲಾ ಆಸ್ಪತ್ರೆ…..

Suddi Sante Desk

ಧಾರವಾಡ –

ನಾಡಹಬ್ಬ ದಸರಾ ಹಬ್ಬದ ಆಚರಣೆ ಸಡಗರ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದ್ದು ಇನ್ನೂ ವಿದ್ಯಾನಗರಿ ಧಾರವಾಡ ದಲ್ಲೂ ಆಯುಧ ಪೂಜೆಯ ಸಡಗರ ಸಂಭ್ರಮ ಕಂಡು ಬಂದಿತು.

ನಗರದ ಹಲವೆಡೆ ಆಯುಧ ಪೂಜೆಯನ್ನು ಅರ್ಥಪೂರ್ಣ ವಾಗಿ ಆಚರಣೆ ಮಾಡಲಾಯಿತು.ಇನ್ನೂ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು.

ಆಸ್ಪತ್ರೆಯ ಸಿಬ್ಬಂದಿಗಳೆಲ್ಲರೂ ಕೂಡಾ ಈ ಒಂದು ಪೂಜೆ ಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.ಇದರೊಂದಿಗೆ ಈ ಒಂದು ಪೂಜೆಯಲ್ಲಿ ವಿಶೇಷವಾಗಿ ಕಂಡು ಬಂದಿದ್ದು ಮುಸ್ಲಿಂ ಸಮಾಜದ ಅಧಿಕಾರಿಯೊಬ್ಬರಿಂದ ಆಯುಧ ಪೂಜೆ ಮಾಡಿಸಿದ್ದು.

ಹೌದು ಜಿಲ್ಲಾ ಆಸ್ಪತ್ರೆ ಧಾರವಾಡದ ರಕ್ತ ಭಂಡಾರದಲ್ಲಿ ಸರ್ವಧರ್ಮದ ಸಂಕೇತವಾಗಿ ಡಾಕ್ಟರ್ ಶಿವಕುಮಾರ್ ಮಾನಕರ್ ಜಿಲ್ಲಾ ಶಸ್ತ್ರ ಚಿಕಿತ್ಸ ಕರ ಮಾರ್ಗದರ್ಶನದಲ್ಲಿ ಈ ಒಂದು ಪೂಜೆ ನೆರವೇರಿತು.

ಹಾರೂನ್ ಜಿಲಾನಿ ನರ್ಸಿಂಗ್ ಆಫೀಸರ್ ಇವರಿಂದ ಆಯುಧ ಪೂಜೆ ನೆರವೇರಿಸಲಾಯಿತು.ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ರಕ್ತ ಬಂಡಾರದ ಹಾಗೂ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.