ಮೂವರು ಶಿಕ್ಷಕರ ಅಮಾನತು ಹಾಜರಾಗದೇ ಸಂಬಳ ಪಡೆದವರು ಅಮಾನತು – ಸುದ್ದಿ ಸಂತೆ ವರದಿ ಫಲಶೃತಿ…..

Suddi Sante Desk

ವಿಜಯಪುರ –

ಶಾಲೆಗೂ ಹಾಜರಾಗದಿದ್ದರೂ ಕೂಡಾ ಕೈ ತುಂಬಾ ಸಂಬಳವನ್ನು ತೆಗೆದುಕೊಳ್ಳುತ್ತಿದ್ದ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.ಹೌದು ಸುದ್ದಿ ಸಂತೆಯ ವರದಿ ಬೆನ್ನಲ್ಲೇ ಮೂವರು ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿ ಆದೇಶವನ್ನು ಮಾಡಲಾಗಿದೆ.ಶಿಕ್ಷಕರ ಶಾಲೆಗೆ ಹಾಜರಾತಿ ಗೈರಾಗಿ ಸಂಬಳ ಪಡೆದ ಕುರಿತು ಸುದ್ದಿ ಸಂತೆ ವರದಿ ಪ್ರಕಟ ಮಾಡಿತ್ತು.

ಈ ಒಂದು ವರದಿ ಬೆನ್ನೆಲ್ಲೇ ಮೂವರು ಶಿಕ್ಷಕರಿಗೆ ಅಮಾನತ್ತು ಶಿಕ್ಷೆಯನ್ನು ಇಲಾಖೆ ನೀಡಿದೆ.ದಿನಾಂಕ 04.09.21 ರಂದು ವರದಿ ಪ್ರಕಟಿಸಿತ್ತು ನಿಮ್ಮ ಸುದ್ದಿ ಸಂತೆ.ದಾಖಲೆ ಸಮೇತ ವರದಿ ಮಾಡಿದ ಹಿನ್ನಲೆ ಮೂವರು ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ. ಎಸ್.ಎಸ್.ಲಕ್ಕುಂಡಿಮಠ ಮುಖ್ಯ ಗುರಗಳು ಹಿರಿಯ ಪ್ರಾಥಮಿಕ ಶಾಲೆ ಹಗರಗುಂಡ ಡಿ.ಪಿ.ಇ.ಪಿ ಕರ್ತವ್ಯ ಲೊಪವೆಸಗಿದ ಕಾರಣ ಅಮಾನತ್ತು ಮಾಡಲಾಗಿದೆ

ಐ.ಎಚ್.ಕುಂಬಾರ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಗರಗುಂಡ ಡಿ.ಪಿ.ಇ.ಪಿ ಇವರು ಶಾಲಾ ಕರ್ತವ್ಯಕ್ಕೆ ಅನಧಿಕೃತ ಗೈರು ಉಳಿದ ಕಾರಣ ಸೇವೆಯಿಂದ ಅಮಾನತ್ತು ಮಾಡಲಾಗಿದೆ

ಕೆ.ಎಮ್.ಕುಂಬಾರ ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತನಡೊಣಿ ಇವರನ್ನು ಕೂಡಾ ಅಮಾನತ್ತು ಮಾಡಲಾಗಿದೆ.ಮೂವರನ್ನು ಅಮಾ ನತ್ತು ಪಡಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.