ಕಲಘಟಗಿ –
ಆಗಸ್ಟ್ 15 ರಂದು ರಾಷ್ಟ್ರಧ್ವಜ ಉಲ್ಟಾ ಪಲ್ಟಾ ಹಾರಿಸಿ ಅವಮಾನ ಮಾಡಿರುವ ಶಿಕ್ಷಕನ ಮೇಲೆ ದೂರು ದಾಖ ಲಾಗಿದೆ.ಹೌದು ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ರಾಷ್ಟ್ರಧ್ವಜ ವನ್ನು ಉಲ್ಟಾ ಹಾರಿಸಿದ ಘಟನೆಗೆ ಸಂಬಂಧಿಸಿದಂತೆ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಕುಂಬಾರ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್ ಡಿಎಂಸಿ)ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕಂಬಾರ ಅವರು ಉಲ್ಟಾ ಕಟ್ಟಿದ್ದ ಭಾವುಟದ ಧ್ವಜಾರೋಹಣವನ್ನು ನಡುವಿನಮನಿ ನೆರವೇರಿಸಿದ್ದರು. ಘಟನೆ ಕುರಿತು ಗ್ರಾಮದ ಪರಶುರಾಮ ದುಂಡಿ ದೂರು ಸಲ್ಲಿಸಿದ್ದಾರೆ