ಬೆಳಗಾವಿ –
ಅಶ್ಲೀಲ ಸಿಡಿ ಪ್ರಕರಣದಲ್ಲಿ ತಮ್ಮ ಮಗಳು ನಾಪತ್ತೆಯಾಗಿದ್ದಾರೆಂದು ಆರೋಪಿಸಿ ಯುವತಿಯ ತಂದೆ ನಿನ್ನೇಯಷ್ಟೇ ಬೆಳಗಾವಿಯ ಎಪಿಎಮ್ ಸಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಈ ಒಂದು ದೂರಿನ ಬೆನ್ನಲ್ಲೇ ಈಗ ತನಿಖೆಗೆಗಾಗಿ ವಿಶೇಷ ತಂಡವೊಂದನ್ನು ನೇಮಕ ಮಾಡಲಾಗಿದೆ ಸಾಹುಕಾರ್ ಸಿಡಿ ಪ್ರಕರಣದಲ್ಲಿ ಯುವತಿ ಪೋಷಕ ರಿಂದ ಕಿಡ್ನ್ಯಾಪ್ ಕೇಸ್ ದಾಖಲುತ್ತಿದ್ದಂತೆ ಇತ್ತ ಯುವತಿಯ ಪೋಷಕರ ದೂರಿನಿಂದ ತಮ್ಮ ಮಗಳನ್ನು ಅಪಹರಿಸಿಸಲಾಗಿದೆ ಎನ್ನುವ ದೂರಿನ ತನಿಖೆಗೆ ವಿಶೇಷ ತಂಡ ರಚನೆಯನ್ನು ಮಾಡಲಾ ಗಿದೆ.ಬೆಳಗಾವಿ ಮಾರ್ಕೇಟ್ ವಿಭಾಗದ ಎಸಿಪಿ ಸದಾಶಿವ ಕಟ್ಟಿಮನಿ, ಎಪಿಎಂಸಿ ಠಾಣೆಯ ಪಿಐ ಜಾವೀದ್ ಮುಶಾಪುರಿ ನೇತೃತ್ವದಲ್ಲಿ ವಿಶೇಷ ತಂಡ ವನ್ನು ರಚನೆ ಮಾಡಲಾಗಿದೆ.ಯುವತಿ ಪೋಷ ಕರ ದೂರು ಆಧರಿಸಿ ಪ್ರಾಥಮಿಕ ತನಿಖೆಗೆ ಮುಂದಾ ಗಿದೆ ತನಿಖಾ ತಂಡ.ಪ್ರಾಥಮಿಕ ತನಿಖೆಯ ನಂತರ ಅವಶ್ಯಬಿದ್ರೆ ಎಸ್.ಐಟಿಗೆ ಪ್ರಕರಣದ ವರ್ಗಾವಣೆ ಬಗ್ಗೆ ಚಿಂತನೆ.ಪ್ರಜಾ ಟಿವಿಗೆ ಡಿಸಿಪಿ ವಿಕ್ರಮ್ ಆಮಟೆ ಮಾಹಿತಿ.