This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮುಖ್ಯ ಶಿಕ್ಷಕ ನಿಧನ – ಶಿಕ್ಷಕರೊಂದಿ ಗೆ ವಿಶೇಷ ಕವನ ಬರೆದು ಅಗಲಿದ ಗುರುವಿಗೆ ಸಂತಾಪ ಸೂಚಿಸಿದ ವಿದ್ಯಾರ್ಥಿನಿ…..

WhatsApp Group Join Now
Telegram Group Join Now

ಕಂಪ್ಲಿ –

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುಖ್ಯ ಶಿಕ್ಷಕ ರೊಬ್ಬರು ನಿ಼ಧನರಾದ ಘಟನೆ ಕಂಪ್ಲಿ ಯಲ್ಲಿ ನಡೆದಿದೆ.ತಾಲೂಕಿನ ಚಿಕ್ಕಜಾಜೂರು ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳಾಗಿರುವ ಪಂಪಾಪತಿ(58) ಅನಾರೋಗ್ಯ ದಿಂದ ನಿಧನರಾಗಿದ್ದಾರೆ.ಮೃತ ಶಿಕ್ಷಕರಿಗೆ ಪತ್ನಿ,ಪುತ್ರಿ ಮೂವ ರು ಇದ್ದಾರೆ.ಇನ್ನೂ ಸ್ವಂತ ಊರಿನಲ್ಲಿ ಇವರ ಅಂತ್ಯಕ್ರಿಯೆ ನೆರವೇರಿಸಲಾಯಿತು.ಇನ್ನೂ ಶಿಕ್ಷಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಸೇರಿದಂತೆ ತಾಲ್ಲೂಕಿನ ಜಿಲ್ಲೆಯ ಮತ್ತು ‌ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ಸಂತಾಪ ವನ್ನು ಸೂಚಿಸಿದ್ದಾರೆ

ಇನ್ನೂ ಅಗಲಿದ ಗುರುವಿಗೆ ಶಾಲೆಯ ಅವರ ವಿದ್ಯಾರ್ಥಿ ಕವನ ಬರೆದು ನೋವು ವ್ಯಕ್ತಪಡಿಸಿದ್ದಾರೆ.


ನೀನು ಇಲ್ಲವೆಂದು ಕಣ್ಣೀರು ಸುರಿಸಲೆ?
ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ?
ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ?
ನೀನು ಉಳಿಸಿದುದೇನೆಂದು ಹುಡುಕಲೆ?
ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ?
ಬದುಕು ಶೂನ್ಯವೆಂದು ವಿರಾಗಿಯಾಗಲೆ?
ಹೃದಯದಲಿ ನಿನ್ನ ನೆನಪು ತುಂಬಿದೆಯೆನ್ನಲೆ?
ಬೆನ್ನು ಹಾಕಿ ಹಿಂದಿನ ದಿನಗಳಲ್ಲೆ ಇರಲೆ?
ನಿನ್ನೆಯ ನೆನಪಿನಲಿ ನಾಳೆ ಹಸನಾಗಿಸಲೆ?
ನೀನು ಇಲ್ಲವೆಂದು ಮನ ಗಟ್ಟಿಗೊಳಿಸಲೆ?
ನಿನ್ನ ನೆನಪನ್ನು ಚಿರವಿರಿಸಿ ಬದುಕಲೆ?
ಅತ್ತು ಕರೆದು ಹಗುರಾಗಿ ಮರೆಯಲೆ?
ಪ್ರೇಮ ವಾತ್ಸಲ್ಯದಮಲಿನಲಿ ನಗುನಗುತಾ
ನಿನ್ನಿಚ್ಛೆಯ ಕೆಲಸಗಳ ಮುನ್ನಡೆಸಲೆ?
ಸರ್ಕಾರಿ ಪದವಿ ಪೂರ್ವ ಕಾಲೇಜು ಪಂಪಪತಿ ಭಾವಪೂರ್ಣ ಶ್ರದ್ಧಾಂಜಲಿ


Google News

 

 

WhatsApp Group Join Now
Telegram Group Join Now
Suddi Sante Desk