ಹುಬ್ಬಳ್ಳಿ –
ಟಿಪ್ಪರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಹೌದು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಈ ಭಯಾನಕ ಅಪಘಾತದ ದೃಶ್ಯ ಸಿಟಿಟಿವಿಯಲ್ಲಿ ಸೆರೆ ಯಾಗಿದೆ.
ಇನ್ನೂ ಈ ಒಂದು ಭೀಕರ ಅಪಘಾತ ದಲ್ಲಿ ಸ್ಥಳದಲ್ಲಿದ್ದ ರೈತ ಬದುಕಿದ್ದೇ ಪವಾಡವಾಗಿದ್ದು ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ದೊಂದು ಮರಳು ತುಂಬಿದ ಟಿಪ್ಪರ್ ಅಪಘಾತ ವಾಗಿದೆ.ನವಲಗುಂದ ದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಮರಳು ತುಂಬಿದ ಟಿಪ್ಪರ್ ಲಾರಿಗೆ ಡಿಕ್ಕಿ ಯಾಗಿದೆ.
ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಬರುವ ಲಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದು ರಸ್ತೆಯ ಪಕ್ಕಕ್ಕಿ ರುವ ಕಂದಕಕ್ಕೆ ಬಿದ್ದಿದೆ ಟಿಪ್ಪರ್.ಈ ವೇಳೆ ರಸ್ತೆ ಪಕ್ಕದಲ್ಲೇ ಹೊರಟಿದ್ದ ರೈತ ಕೂದಲೆಳೆಯ ಅಂತರದಿಂದ ಪಾರಾ ಗಿದ್ದಾರೆ.
ಈ ಎಲ್ಲಾ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ದೊಡ್ಡದೊಂದು ಅವಘಡ ವೊಂದು ತಪ್ಪಿ ದಂತಾಗಿದೆ.