ಧಾರವಾಡ –
ಧಾರಾಕಾರ ಮಳೆಗೆ ಧಾರವಾಡದ ಕೊರ್ಟ್ ಸರ್ಕಲ್ ನಲ್ಲಿ ಮರವೊಂದು ಬಿದ್ದಿದೆ. ಹೌದು ಆಗೊಮ್ಮೆ ಈಗೊಮ್ಮೆ ಆಗುತ್ತಿರುವ ಮಳೆಗೆ ನಗರದ ಕೊರ್ಟ್ ವೃತ್ತದಲ್ಲಿ ಈ ಒಂದು ಘಟನೆ ನಡೆದಿದೆ.ಅದೃಷ್ಟವಶಾತ್ ಗಿಡದ ಕೆಳಗೆ ಯಾರು ಇಲ್ಲದ ಕಾರಣದಿಂದಾಗಿ ದೊಡ್ಡ ಅನಾಹುತ ವೊಂದು ತಪ್ಪಿದಂತಾಗಿದೆ.
ಇನ್ನೂ ದೊಡ್ಡ ಮರದ ಕೊಂಬೆಯೊಂದು ದಿಢೀರನೇ ಮುರಿದುಕೊಂಡು ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಇನ್ನೂ ಪ್ರಮುಖವಾಗಿ ಮರ ಬಿದ್ದು ತುಂಬಾ ಸಮಯವಾಗಿದ್ದರು ಕೂಡಾ ಈವರೆಗೆ ಸ್ಥಳಕ್ಕೆ ಯಾರು ಕೂಡಾ ಬಂದು ನೊಡದೇ ತೆರುವು ಮಾಡಿಲ್ಲವಂತೆ ಹೀಗಾಗಿ ಪ್ರಮುಖ ರಸ್ತೆಯೇ ಬಂದ್ ಆಗಿದ್ದು ಸಾರ್ವಜನಿಕರು ಪರದಾಡುತ್ತಿದ್ದಾರೆ.
ಇನ್ನಾದರೂ ಕೂಡಲೇ ರಸ್ತೆಯ ಮಧ್ಯದಲ್ಲಿಯೇ ಬಿದ್ದಿರುವ ಮರವನ್ನು ತೆರುವುಗೊಳಿಸುವಂತೆ ಸಾರ್ವಜನಿಕರು ಒತ್ತಾಯವನ್ನು ಮಾಡಿದ್ದಾರೆ.