ತಿರುವನಂತಪುರಂ (ಕೇರಳ) –
ಪತಿಗೆ ಪತ್ನಿ ಅಧಿಕಾರ ವನ್ನು ಹಸ್ತಾಂತರ ಮಾಡಿದ ಅಪರೂಪದ ಘಟನೆ ಯೊಂದು ಕೇರಳದಲ್ಲಿ ಕಂಡು ಬಂದಿದೆ.ಕೇರಳದ ಅಲಪ್ಪುಳದಲ್ಲಿ ಈ ಒಂದು ಅಪರೂಪದ ಘಟನೆಯೊಂದು ನಡೆದಿದ್ದು ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಮತ್ತು ಪತಿಗೆ ಅಧಿಕಾರ ಹಸ್ತಾಂತರಿಸಿ ಸುದ್ದಿಯಾಗಿ ವೈರಲ್ ಆಗಿದ್ದಾರೆ
ಅಲಪ್ಪುಳದ ನಿರ್ಗಮಿತ ಜಿಲ್ಲಾಧಿಕಾರಿ ರೇಣು ರಾಜ್ ಅವರು ಶ್ರೀರಾಮ್ ವೆಂಕಿಟ್ರಾಮನ್ ಹಾಗೂ ಅವರ ಪತಿಗೆ ಅಧಿಕಾರ ಹಸ್ತಾಂತರಿಸಿದ ಅಪರೂಪದ ಘಟನೆ ನಡೆಯಿತು ರೇಣು ರಾಜ್ ವೆಂಕಿಟ್ರಾಮನ್ ಅವರನ್ನು ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿ ಹಸ್ತಲಾ ಘವ ಮಾಡಿದರು.ಇನ್ನೊಂದೆಡೆ ವೆಂಕಿಟ್ರಾಮನ್ ಹುದ್ದೆ ಯನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಪ್ರತಿಭಟನೆ ನಡೆಸುವುದ ರೊಂದಿಗೆ ಕಚೇರಿಯ ಹೊರಗೆ ಗೊಂದಲ ಸೃಷ್ಟಿಸಿದರು.
ಅಪಘಾತ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು ಬಂಧಿಸಿ ಸೇವೆಯಿಂದ ಅಮಾನತುಗೊಳಿಸ ಲಾಗಿತ್ತು.ಹೀಗಾಗಿ ಯುಡಿಎಫ್ ಕಾರ್ಯಕರ್ತರು ಅವರನ್ನು ಇಲ್ಲಿಗೆ ಪೋಸ್ಟ್ ಮಾಡಿರುವುದನ್ನು ವಿರೋಧಿಸಿದರು. 2019 ರಲ್ಲಿ ವೆಂಕಿಟ್ರಾಮನ್ ತಮ್ಮ ಸ್ನೇಹಿತೆ ವಾಫಾ ಫಿರೋಜ್ ಜೊತೆಗೆ ಅತಿವೇಗದಲ್ಲಿ ಕಾರನ್ನು ಚಲಾಯಿಸುತ್ತಿ ದ್ದಾಗ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತರೊ ಬ್ಬರು ಮೃತಪಟ್ಟಿದ್ದರು.2020 ರಿಂದ ಅವರು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ.ಅವರು ಈಗ ಆಲಪ್ಪುಳಕ್ಕೆ ಹೊಸ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ.