This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಲಾರಿ ಬೈಕ್ ನಡುವೆ ಅಪಘಾತ ಮುಖ್ಯೋಪಾಧ್ಯಾಯ ಸ್ಥಳದಲ್ಲೇ ಸಾವು – ಸ್ವಲ್ಪದರಲ್ಲೇ ಪಾರಾದ ಪುಟ್ಟ ಕಂದಮ್ಮ…..

WhatsApp Group Join Now
Telegram Group Join Now

ಬೆಳ್ತಂಗಡಿ –

ಲಾರಿ ಮತ್ತು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಸರ್ಕಾರಿ ಪ್ರೌಢಶಾಲಾ ಶಿಕ್ಷಕರೊಬ್ಬರು ಸಾವಿಗೀ ಡಾದ ಘಟನೆ ಮೈಸೂರಿನ ಕೆ.ಆರ್.ನಗರದ ಬಳಿ ನಡೆದಿದೆ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಈ ಒಂದು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮುಖ್ಯೋಪಾಧ್ಯಾಯ ರೊಬ್ಬರು ಮೃತರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಮುಖ್ಯೋಪಾಧ್ಯಯ ರಾಗಿದ್ದ ಸುರೇಶ್ ಎಂ.(44) ನಿಧನರಾದವರಾಗಿದ್ದಾರೆ.ಮಗ ಮಾನ್ವಿತ್(೯)ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ಕಳೆದ 2021 ಏಪ್ರಿಲ್ 1 ರಂದು ನಿಡ್ಲೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯರಾಗಿ ಕರ್ತವ್ಯಕ್ಕೆ ನೇಮಕ ಗೊಂಡಿದ್ದ ಸುರೇಶ್ ಅವರು ಮೂಲತಃ ಕೊಳ್ಳೆಗಾಲ ನಿವಾಸಿಯಾಗಿದ್ದು ಪ್ರಸಕ್ತ ಮೈಸೂ ರಿನಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸವಾಗಿದ್ದರು.

ಜನವರಿ 7 ರಂದು ನಿಡ್ಲೆ ಯಿಂದ ತಮ್ಮ ಊರಿಗೆಂದು ತೆರಳಿದ್ದರು.ಜನವರಿ 9 ರಂದು ಸಂಜೆ ಮೈಸೂರಿನ ಕೆ.ಆರ್. ನಗರದ ಬಳಿ ಪುತ್ರ ಹಾಗೂ ಮತ್ತೊರ್ವರೊಂದಿಗೆ ತೆರಳು ತ್ತಿದ್ದಾಗ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸಂತೋಷ್ ಹಾಗೂ ಸಹಸವಾರ ರವಿಶಂಕರ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.ತಾಯಿ, ಪತ್ನಿ, ಇಬ್ಬರು ಪುತ್ರರು ಹಾಗೂ ಸಹೋ ದರರನ್ನು ಅಗಲಿದ್ದಾರೆ. ಮಗ ಮಾನ್ವಿತ್ (೯) ಸಣ್ಣಪುಟ್ಟ ಗಾಯದೊಂದಿಗೆ ಪಾರಾ ಗಿದ್ದಾರೆ.ಇನ್ನೂ ಸಧ್ಯ ದೂರು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk